ಸಬ್ಸಿಡಿ ಟರ್ಪಾಲ್ ನ ದರ ಮಾರುಕಟ್ಟೆ ದರದಷ್ಟೇ ಇದೆ:ಗುತ್ತಿಗಾರು ಗ್ರಾಮ ಸಭೆಯಲ್ಲಿ ಪ್ರಸ್ತಾಪ

0

ಗುತ್ತಿಗಾರು ಗ್ರಾ.ಪಂ ನ ಗ್ರಾಮ ಸಭೆ ಗುತ್ತಿಗಾರು ಗ್ರಾ.ಪಂ ನ ಪ.ವರ್ಗಗಳ ಸಭಾಂಗಣದಲ್ಲಿ ಇಂದು ನಡೆಯಿತು.

ಸಭೆಯಲ್ಲಿ ವಿಕಲ ಚೇತನರೊಬ್ಬರಿಗೆ ಆಧಾರ್ ಕಾರ್ಡ್ ಆಗದಿರುವ ಬಗ್ಗೆ, ಸರ್ಕಾರ ಕೊಡುವ ಪೈಪ್, ಸಬ್ಸಿಡಿ ಟರ್ಪಾಲ್ ನ ದರ ಮಾರುಕಟ್ಟೆ ದರದಷ್ಟೇ ಇರುವ ಬಗ್ಗೆ, ಜಾಗದ ಸರ್ವೆ ನಂಬರ್ ಮಾಯವಾಗಿರುವ ಬಗ್ಗೆ ಬಗ್ಗೆ ಚರ್ಚೆಯಾಯಿತು.

ಗ್ರಾ.ಪಂ ಅಧ್ಯಕ್ಷೆ ರೇವತಿ ಆಚಳ್ಳಿ ಅಧ್ಯಕ್ಷತೆ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ನೆಕ್ರಾಜೆ ಇದ್ದರು. ಗ್ರಾ.ಪಂ ಉಪಾಧ್ಯಕ್ಷೆ ಪ್ರಮೀಳಾ ಎರ್ದಡ್ಕ, ಗ್ರಾ.ಪಂ ಸದಸ್ಯರುಗಳಾದ ಎಂ.ಕೆ ಶಾರದಾ, ಲೀಲಾವತಿ ಅಂಜೇರಿ, ಪಿ.ಡಿ.ಒ ಧನಪತಿ, ತಾಲೂಕು ಆರೋಗ್ಯಧಿಕಾರಿ ಡಾ।ನಂದಕುಮಾರ್ ವೇದಿಕೆಯಲ್ಲಿದ್ದರು.

ಗ್ರಾಪಂ ಸದಸ್ಯರುಗಳು ಉಪಸ್ಥಿತರಿದ್ದರು. ಪ್ರಮೀಳಾ ಎರ್ದಡ್ಕ ಸ್ವಾಗತಿಸಿದರು. ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ ಪ್ರಸ್ತಾವಿಕ ಮಾತನಾಡಿದರು. ಪಿಡಿಒ ಧನಪತಿ ಮಾಹಿತಿ ನೀಡಿದರು. ಪಂಚಾಯತ್ ಸಿಬ್ಬಂದಿ ಅನಿತಾ ವರದಿ ವಾಚಿಸಿದರು. ತೇಜಾವತಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.