ಶ್ರೀಮತಿ ಸುಶೀಲಾ ಕಣಕ್ಕೂರು ನಿಧನ

0

ಆಲೆಟ್ಟಿ ಗ್ರಾಮದ ಕಣಕ್ಕೂರು ಬಾಲಕೃಷ್ಣ ಮಣಿಯಾಣಿ ಯವರ ಪತ್ನಿ ಶ್ರೀಮತಿ ಸುಶೀಲಾ ಕಣಕ್ಕೂರು ರವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಮನೆಯಲ್ಲಿ ಇರುವ ವೇಳೆಯಲ್ಲಿ ಮುಂಜಾನೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬಂದಡ್ಕದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದಿದ್ದು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಮೃತರು ಪತಿ ಹಾಗೂ ಇಬ್ಬರು ಪುತ್ರರಾದ ಜಯರಾಜ್ ಕಣಕ್ಕೂರು, ಶ್ರೀಜಿತ್ ಕಣಕ್ಕೂರು ಮತ್ತು ಓರ್ವ ಪುತ್ರಿ ಶ್ರೀಮತಿ ಶ್ರೀವಿದ್ಯಾ, ಸೊಸೆಯಂದಿರಾದ ಶ್ರೀಮತಿ ಅಶ್ವಿತಾ, ಶ್ರೀಮತಿ ರಮ್ಯ, ಅಳಿಯ ರಾಜ್ ಕುಮಾರ್ ಹಾಗೂ ಸಹೋದರ ,ಸಹೋದರಿಯರನ್ನು, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.