ಜಾಲ್ಸೂರು : ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಗೊನೆ ಮುಹೂರ್ತ

0

ಜ.29 ರಂದು ಜಾಲ್ಸೂರುನ ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ನಂಗಾರು ಕುಟುಂಬದ ತರವಾಡು ಮನೆಯಾದ ಮೋಹನ್ ನಂಗಾರುರವರ ತೋಟದಿಂದ ಗೊನೆ ಮುಹೂರ್ತ ಜ. 22 ರಂದು ನಡೆಯಿತು.

ಮಂದಿರದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಪೆರುಂಬಾರು ನೇತೃತ್ವದಲ್ಲಿ ನಡೆದ ಗೊನೆ ಮುಹೂರ್ತ ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಅಧ್ಯಕ್ಷ ಬಾಬು ಪಾಟಾಳಿ, ಮೋಹನ್ ನಂಗಾರು, ಅತ್ಮಾನಂದ ಗಬ್ಬಲಡ್ಕ, ಮಾಧವ ಗೌಡ ಕಾಳಮನೆ, ತೀರ್ಥರಾಮ ನಂಗಾರು ಆರಂತೋಡು, ಕಮಲಾಕ್ಷ ನಂಗಾರು, ತಿಮ್ಮಯ್ಯ ಆಚಾರಿ, ಜಯಾನಂದ ನಂಗಾರ್ ಉಪಸ್ಥಿತರಿದ್ದರು.