ಮುಂಬೈನಲ್ಲಿ ನಡೆಯಲಿರುವ ಕಾಮಿಡಿ ಶೋನಲ್ಲಿ ಸುಳ್ಯ ಅಮರ ತರಂಗ ತಂಡದ ಸದಸ್ಯರು ಭಾಗಿ

0

.26 ರಂದು ವೆಸ್ಟ್ ಮುಂಬೈನ ವಸಾಯಿಯಲ್ಲಿರುವ ಕರ್ನಾಟಕ ಸಂಘ (ರಿ)ಇದರ 36ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ಟಿವಿ ಬಲೆ ತೆಲಿಪಾಲೆ ಕಾಮಿಡಿ ಶೋ ಖ್ಯಾತಿಯ ಪುತ್ತೂರಿನ ಹೆಸರಾಂತ ತಂಡ ಮಕ್ಕರ್ ತಂಡದಿಂದ ಕಾಮಿಡಿ ಶೊ ನಡೆಯಲಿದೆ.
ಮಕ್ಕರ್ ತಂಡದ ಸಮಗ್ರ ನಿರ್ವಾಹಕ ,ಅಮರ ತರಂಗ ಸುಳ್ಯ ತಂಡದ ನಿರ್ದೇಶಕ ಅಮರ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ನಾಟಕದ ಪೆರುವಾಜೆ ಊಕ್ಕಣ್ಣ ಬಂಟ ಮತ್ತು ಕಾವಲುಗಾರ ಪಾತ್ರದಾರಿ ರಂಜಿತ್ ರೈ ಸುಳ್ಯ, ಮಕ್ಕರ್ ತಂಡದ ಸದಸ್ಯ, ಅಮರತರಂಗ ತಂಡದ ಉಪಾಧ್ಯಕ್ಷ , ಅಮರಸಮರವೀರ ಕೆದಂಬಾಡಿ ರಾಮಯ್ಯ ಗೌಡ ನಾಟಕದ ರಾಮಯ್ಯಗೌಡರ ಪಾತ್ರದಾರಿ ಪ್ರಸಾದ್ ಕಾಟೂರು ಸಹಿತವಾಗಿ ಮಕ್ಕರ್ ತಂಡದ 10 ಕಲಾವಿದರ ತಂಡ ಕಾರ್ಯಕ್ರಮ ನೀಡಲು 25ರಂದು ಮುಂಬೈಗೆ ತೆರಳಿಲಿದೆ.