ಜ.26 ರಿಂದ ಜ.29ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹೋತ್ಸವ

0

ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹೋತ್ಸವವು ಜ.27 ರಂದು ಕೋಡಿಯಡ್ಕ ವೇದಮೂರ್ತಿ ತಂತ್ರಿ ಕಿಳಿಂಗಾರು ಶ್ರೀ ಶಿವರಾಮ ಭಟ್‌ರವರ ನೇತೃತ್ವದಲ್ಲಿ ನಡೆಯಲಿದೆ.

ಜ.26ರ  ಸಂಜೆ ಹಸಿರುವಾಣಿ ಸಮರ್ಪಣೆ ನಡೆಯಲಿದೆ. ಜ.27 ರಂದು ಬೆಳಗ್ಗೆ ಶ್ರೀ ಗಣಪತಿಹವನ, ಕಲಾಭಿಷೇಕ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಕಟ್ಟ ಚಾವಡಿಯಿಂದ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮವಿದೆ.ರಾತ್ರಿ ವಿಶೇಷ ಕಾರ್ತಿಕ ಪೂಜೆ ನಡೆಯಲಿದ್ದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಜ.28 ರ ಪೂರ್ವಾಹ್ನ ದೈವಗಳ ನೇಮ ನಡೆಯಲಿದ್ದು, ಅಪರಾಹ್ನ ದೇವಸ್ಥಾನದಿಂದ ಮಿತ್ತೋಡಿಗೆ  ಭಂಡಾರ ಹೋಗಲಿದೆ. ರಾತ್ರಿ ಚಾಳೆಪ್ಪಾಡಿ ಗಾಣಿಗಮಜಲು ವಿನಲ್ಲಿ ಶ್ರೀ ಅಗ್ನಿಗುಳಿಗರಾಜ ನೇಮೋತ್ಸವ ನಡೆಯಲಿದೆ. ಜ.29 ರಂದು ಬೆಳಗ್ಗೆ ಮಿತ್ತೋಡಿಯಲ್ಲಿ ದೈವಗಳ ನೇಮ ನಡೆಯಲಿದ್ದು ಅಪರಾಹ್ನ ಕಟ್ಟ ಚಾವಡಿಗಳಿಗೆ ದೈವಗಳ ಭಂಡಾರ ಹೊರಡಲಿದೆ.

ಸಾಂಸ್ಕ್ರತಿಕ, ಧಾರ್ಮಿಕ ಸಭೆ:

ಜ.27 ರ ಸಂಜೆ ಗಂಟೆ 6 ರಿಂದ ಅಂಗನವಾಡಿ, ಕಟ್ಟ ಗೋವಿಂದ ನಗರ ಕಿರಿಯ ಪ್ರಾಥಮಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ರಾತ್ರಿ ಗಂಟೆ 8 ರಿಂದ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 10 ರಿಂದ ಶ್ರೀ ಕೋದಂಡರಾಮ ಕೃ‍ಪಾಪೋಸಿತ ಯಕ್ಷಗಾನ ಮಂಡಳಿ ವತಿಯಿಂದ ಶುಕ್ರನಂದನೆ ಯಕ್ಷಗಾನ ನಡೆಯಲಿದೆ.