ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಗಣರಾಜ್ಯೋತ್ಸವ

0

ಲಂಚ, ಭ್ರಷ್ಟಾಚಾರ ವಿರುದ್ಧದ ಪ್ರತಿಜ್ಞೆ ಸ್ವೀಕಾರ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸುಳ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ 74ನೇ ಗಣರಾಜ್ಯೋತ್ಸವ ವನ್ನು ಆಚರಿಸಲಾಯಿತು.
ಭಾರತೀಯ ಜೂನಿಯರ್ ಛೆಂಬರ್ ವಲಯ 15ರ ಉಪಾಧ್ಯಕ್ಷ ಜೇಸಿ ದೇವರಾಜ್‌ ಕುದ್ಪಾಜೆ ಧ್ವಜಾರೋಹಣ ನೆರವೇರಿಸಿದರು. ವಲಯ ಸಂಯೋಜಕ ಜೆಸಿ ಗುರುರಾಜ ಅಜ್ಜಾವರ, ಪಯಸ್ವಿನಿ ಜೇಸಿಯ ಅದ್ಯಕ್ಷ ನವೀನ್ ಕುಮಾರ್, ರಂಜಿತ್ ಕುಕ್ಕೆಟ್ಟಿ, ಸುರೇಶ್ ಕಾಮತ್, ಅಕ್ಷತ್ ಕುಮಾರ್, ಸಿಬ್ಬಂದಿ ಗಳಾದ ಜಲಜಾಕ್ಷಿ, ಸುಮತಿ, ಗಾಯತ್ರಿ ವಿದ್ಯಾರ್ಥಿಗಳು ಉಪಸ್ಥಿತಿ ರಿದ್ದರು.

ಈ ಸಂದರ್ಭದಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧದ ಪ್ರತಿಜ್ಞೆ ಸ್ವೀಕಾರ ಮಾಡಲಾಯಿತು.