ಕಡೆಪಾಲದಲ್ಲಿ ನೇಮೋತ್ಸವ : ಆಮಂತ್ರಣ ಬಿಡುಗಡೆ

0


ಸಂಪಾಜೆ ಗ್ರಾಮದ ಕಡೆಪಾಲದಲ್ಲಿ ಮಾ. 5 ಮತ್ತು 6 ರಂದು ಆದಿ ಮೊಗೇರ್ಕಳ, ತನ್ನಿಮಾನಿಗ, ಕೊರಗಜ್ಜ ನೇಮೋತ್ಸವ ನಡೆಯಲಿದ್ದುಜ್ಜಿದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಜ.29 ರಂದು ಕಡೆಪಾಲ ಕೊರಗಜ್ಜನ ಸಾನಿಧ್ಯದಲ್ಲಿ ನಡೆಯಿತು. ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರಪದ್ಮನಾಭ ಆಚಾರ್ಯ, ಪೂರ್ಣಿಮಾ ಟೆಕ್ಸ್‌ಟೈಲ್ಸ್ ಮಾಲಕ ಯು.ಬಿ.ಚಕ್ರಪಾಣಿ, ಹೇಮನಾಥ ಕಡೆಪಾಲ, ಶಿವಪ್ರಸಾದ್, ಬಾಲಕೃಷ್ಣ, ಸಮಿತಿಯ ಪದಾದಿಕಾರಿಗಳು ಉಪಸ್ಥಿತರಿದ್ದರು.