ಕೊಯಿಕುಳಿ ಶಾಲೆಯಲ್ಲಿಪ್ರತಿಭಾ ದಿನೋತ್ಸವ ಕಾರ್ಯಕ್ರಮ

0


ದುಗ್ಗಲಡ್ಕದ ಕೊಯಿಕುಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ದಿನೋತ್ಸವ ಜ.28ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಯಕ್ಷಗಾನ ನಾಟ್ಯಗುರು ಬಾಲಕೃಷ್ಣ ನಾಯರ್ ನೀರಬಿದಿರೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀಮತಿ ಶೀಲಾವತಿ ಮಾಧವ ವಹಿಸಿದ್ದರು. ಶ್ರೀಮತಿ ವಾರಿಜ ಕೋರಗಪ್ಪಗೌಡ,ಗಂಗಾಧರ ನೀರಬಿದಿರೆ,ಮಾಧವ ದುಗ್ಗಲಡ್ಕ ,ಮುಖ್ಯಶಿಕ್ಷಕ ಮಾಧವ ಮೂಕಮಲೆ,ಶಿಕ್ಷಕಿ ಚಂದ್ರಕಲಾ ಕೆ. ಸಿ. ಉಪಸ್ಥಿತರಿದ್ದರು. ಪೋಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಕೊನೆಯಲ್ಲಿ ಮಕ್ಕಳಿಂದ ವ್ಯೆವಿಧ್ಯಮಯ ಸಾಂಸ್ಕೃತಿಕ ಸಂಭ್ರಮ ನಡೆಯಿತು.