ಜ.31 ರಂದು ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ
ಕುಶಾಲಪ್ಪ ಗೌಡ ಆರ್ತಾಜೆ ಸೇವಾ ನಿವೃತ್ತಿ

0

ಸುಳ್ಯ – ಸುಬ್ರಹ್ಮಣ್ಯ – ಬೆಂಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಸುಳ್ಯ ಪೈಚಾರು ಸಮೀಪದ ಆರ್ತಾಜೆ ನಿವಾಸಿ ಕುಶಾಲಪ್ಪ ಗೌಡರು ಜ.31ರಂದು ಸೇವಾ ನಿವೃತ್ತಿ ಪಡೆಯಲಿದ್ದಾರೆ.
ಕುಶಾಲಪ್ಪ ಗೌಡರು 1992ರ ನವೆಂಬರ್ ತಿಂಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗದ ಪುತ್ತೂರು ಡಿಪೋದಲ್ಲಿ ಚಾಲಕರಾಗಿ ಸರಕಾರಿ ಸೇವೆ ಆರಂಭಿಸಿದರು. ಸುಳ್ಯ ಡಿಪೋ ಆರಂಭವಾದ ಬಳಿಕ ಸುಳ್ಯಕ್ಕೆ ಬಂದರು. ಕಳೆದ 13 ವರ್ಷಗಳಿಂದ ರಾತ್ರಿ 9ಗಂಟೆಗೆ ಸುಳ್ಯ ದಿಂದ ಹೊರಟು ಸುಬ್ರಹ್ಮಣ್ಯ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು 31 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಪತ್ನಿ ಶ್ರೀಮತಿ ಧರ್ಮಾವತಿ ಗೃಹಿಣಿಯಾಗಿದ್ದಾರೆ. ಪುತ್ರ ಕೀರ್ತನ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಸುರತ್ಕಲ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರಿ ಚೈತ್ರಾ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.