ಪಾಲಡ್ಕದಲ್ಲಿ ಅಂಬ್ಯುಲೆನ್ಸ್ – ಐರಾವತ ಬಸ್ ಅಪಘಾತ

0

ಸುಳ್ಯದಿಂದ ರೋಗಿಯೊಬ್ಬರನ್ನು ಬೆಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಕೆ.ವಿ.ಜಿ. ಆಸ್ಪತ್ರೆ ಅಂಬ್ಯುಲೆನ್ಸ್ ಹಾಗೂ ಸುಳ್ಯ‌ಕ್ಕೆ ಬರುತ್ತಿದ್ದ ಐರಾವತ ಬಸ್ ಮಧ್ಯೆ ಸುಳ್ಯ ಸಮೀಪದ ಪಾಲಡ್ಕದಲ್ಲಿ ಅಪಘಾತವಾದ ಘಟನೆ ವರದಿಯಾಗಿದೆ.

ಅಂಬ್ಯುಲೆನ್ಸ್ ನಲ್ಲಿ ಎದುರು ಕುಳಿತಿದ್ದ ಸ್ವಸ್ತಿಕ್ ಎಂಬ ಯುವಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಹೆಚ್ಚಿನ ಗಾಯಗಳು ಆಗಿಲ್ಲ. ಅಂಬ್ಯುಲೆನ್ಸ್ ನಲ್ಲಿದ್ದ ರೋಗಿಯನ್ನು ಬೇರೆ ಅಂಬ್ಯುಲೆನ್ಸ್ ನಲ್ಲಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.ಅಂಬ್ಯುಲೆನ್ಸ್ ನಜ್ಜುಗುಜ್ಜಾಗಿದೆ.