ಬೆಳ್ಳಾರೆಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಸತೀಶ್ ಬೆಳ್ಳಾರೆ

0

. ಮುರುಳ್ಯದ ಬಡ ಕೂಲಿಕಾರ್ಮಿಕರೊಬ್ಬರ ಹಣದ ಚೀಲವೊಂದು ಬೆಳ್ಳಾರೆ ಪೇಟೆಯಲ್ಲಿ ಜ.28 ರಂದು ಕಳೆದುಹೋಗಿತ್ತು. ಆ ಸಮಯದಲ್ಲಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಅಟೋ ಚಾಲಕ ಸತೀಶ್ ಅವರಿಗೆ ಹಣದಚೀಲ ಬಿದ್ದುಸಿಕ್ಕಿತು.ಹಣ ಕಳೆದುಕೊಂಡವರು ಪೇಟೆಯಲ್ಲಿ ಹುಡುಕಾಡಿ ಮನೆಗೆ ತೆರಳಿದ್ದರು.
ಎರಡು ದಿನದ ನಂತರ ಆಟೋ ಚಾಲಕರೊಬ್ಬರಿಗೆ ಹಣ ಬಿದ್ದುಸಿಕ್ಕಿರೋದು ತಿಳಿಯಿತು.ನಂತರ ಆಟೋ ಚಾಲಕರಾದ ಸತೀಶ್ ಅವರಿಗೆ ಫೋನ್ ಮಾಡಿ ವಿಚಾರಿಸಿದರು.
ವಿಚಾರಿಸಿದಾಗ ಹಣ ಸಿಕ್ಕಿರುವುದನ್ನು ಸತೀಶರು ಹೇಳಿದರು.
ನಂತರ ಜ.31 ರಂದು ನಿಂತಿಕಲ್ಲಿನಿಂದ ಬೆಳ್ಳಾರೆಗೆ ಬಂದು ಅಟೊ ಚಾಲಕ ಸತೀಶರವರಿಂದ ಹಣವನ್ನು ಪಡೆದುಕೊಂಡರು. ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಸತೀಶರವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.