ಸುಳ್ಯ ನಗರ ಪಂಚಾಯತ್ ಕಚೇರಿ ಕಟ್ಟಡದ ಹಿಂಭಾಗದಲ್ಲಿದ್ದ ರಾಶಿ ರಾಶಿ ಕಸದ ತೆರವು ಕಾರ್ಯ ಬರದಿಂದ ಸಾಗುತ್ತಿದೆ.
ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಕಸದ ರಾಶಿಯು ತುಂಬಿದ್ದು, ಬಳಿಕ ಬೃಹತ್ ಹೂಂಡಗಳನ್ನು ನಿರ್ಮಾಣ ಮಾಡಿ ಅದರಲ್ಲಿಯೂ ಪ್ಲಾಸ್ಟಿಕ್ ಕಸಗಳನ್ನು ತುಂಬಿ ಮುಚ್ಚಲಾಗಿತ್ತು.
ಇತ್ತೀಚೆಗೆ ನೂತನವಾಗಿ ಬಂದಂತಹ ಜಿಲ್ಲಾಧಿಕಾರಿಯವರು ಸುಳ್ಯ ನಗರ ಪಂಚಾಯತಿ ಕಚೇರಿಗೆ ಭೇಟಿ ನೀಡಿದ ಸಂದರ್ಭ ಈ ಪರಿಸರವನ್ನು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಾಗೂ ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶವನ್ನು ನೀಡಿದ್ದರು.
ಇದೀಗ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಆವರಣದಲ್ಲಿರುವ ಕಸದ ತೆರವಿಗೆ ಮುಂದಾಗಿದ್ದಾರೆ.
ಈ ಮೊದಲು ಹೊಂಡಗಳಲ್ಲಿ ತುಂಬಿದ ಕಸದ ರಾಶಿಗಳನ್ನು ಜೆಸಿಬಿ ಮೂಲಕ ತೆಗೆಯಲಾಗುತ್ತಿದ್ದು ಪರಿಸರ ಸ್ವಚ್ಛಗೊಳ್ಳುತ್ತಿದೆ.