ಕನಕಮಜಲು ಸಹಕಾರಿ ಸಂಘದಿಂದ ಸಾಂತ್ವನ ನಿಧಿ ಹಸ್ತಾಂತರ

0

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಇದರದಲ್ಲಿ ಸದಸ್ಯರಾಗಿದ್ದು, ಅಗಲಿರುವ ಸದಸ್ಯರುಗಳ ಮನೆಯವರಿಗೆ ಸಹಕಾರಿ ಸಂಘದ ವತಿಯಿಂದ ಸಾಂತ್ವನ ನಿಧಿಯನ್ನು ಜ.31ರಂದು ಹಸ್ತಾಂತರಿಸಲಾಯಿತು.


ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸದಸ್ಯರಾಗಿದ್ದು, ಅಗಲಿರುವ ಸದಸ್ಯರುಗಳಾದ ಶಿವರಾಮ ಗೌಡ ಪಲ್ಲತ್ತಡ್ಕ, ತಾರಾವತಿ ಬಿ. ನೀರಬಸಿರು, ಲಲಿತ ಸೋಣಂಗೇರಿ, ಚಿನ್ನಪ್ಪ ನಾಯ್ಕ ಸುಂಕಡ್ಕ, ಕುಶಾಲಪ್ಪ ಗೌಡ ಹುಲಿಮನೆ, ಶೇಷಪ್ಪ ಗೌಡ ದರ್ಖಾಸ್ತು ಕುಕ್ಕಂದೂರು ಅವರ ಮನೆಯವರಿಗೆ ತಲಾ ಐದು ಸಾವಿರದಂತೆ ಸಾಂತ್ವನ ನಿಧಿ ಹಣವನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ನಿರ್ದೇಶಕರುಗಳಾದ ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ, ಗಣೇಶ್ ಅಂಬಾಡಿಮೂಲೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಅವರು ಉಪಸ್ಥಿತರಿದ್ದರು.