ಕೃಷ್ಣಪ್ಪ ಮೂಲ್ಯ ಬಸ್ತಿಗುಡ್ಡೆ ನಿಧನ

0

ಬೆಳ್ಳಾರೆ ಗ್ರಾಮದ ಬಸ್ತಿಗುಡ್ಡೆ ನಿವಾಸಿ ಕೃಷ್ಣಪ್ಪ ಮೂಲ್ಯ ಅಲ್ಪ ಕಾಲದ ಅಸೌಖ್ಯದಿಂದ ಜ. 31ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 76ವರ್ಷ ವಯಸ್ಸಾಗಿತ್ತು. ಇವರು ಹಲವು ವರ್ಷಗಳ ಕಾಲ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ದೇವರ ಸೇವೆ ಮತ್ತು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಗ್ನಿ ಗುಳಿಗ ದೈವ ಮತ್ತು ಇತರ ಸೇವೆಗಳನ್ನು ಮಾಡುತ್ತಾ ಬಂದಿದ್ದರು. ಮೃತರು ಮಕ್ಕಳಾದ ಚಂದ್ರಶೇಖರ ಬಿ, ಗೋಪಾಲಕೃಷ್ಣ ಬಿ, ಸುರೇಶ ಬಿ, ಸಹೋದರರಾದ ಶೇಷಪ್ಪ ಕುಲಾಲ್, ಸಂಜೀವ ಕುಲಾಲ್, ರಾಮಕೃಷ್ಣ ಕುಲಾಲ್ ಸೇರಿದಂತೆ ಇಬ್ಬರು ಸಹೋದರಿಯರು, ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.