ಫೆ. 11ರಿಂದ ಫೆ. 14: ಕಾಂಚೋಡು ಜಾತ್ರೋತ್ಸವ

0

ಇಂದು ಗೊನೆ ಮುಹೂರ್ತ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಅಣ್ಣಪ್ಪಾದಿ ದೈವಗಳ ನೇಮೋತ್ಸವ ಫೆ. 11ರಿಂದ ಫೆ. 14ರ ವರೆಗೆ ನಡೆಯಲಿದೆ.



ಫೆ. 4ರಂದು ದೇವತಾ ಪ್ರಾರ್ಥನೆ, ಗೊನೆ ಮುಹೂರ್ತ ನಡೆಯಿತು. ದೇವಳದ ಧರ್ಮದರ್ಶಿ ಪರಮೇಶ್ವರಯ್ಯ ಕಾಂಚೋಡು, ಪ್ರಧಾನ ಕಾರ್ಯದರ್ಶಿ ಯಂ. ಶಂಕರನಾರಾಯಣ ಭಟ್ ಮತ್ತು ಆಡಳಿತ ಮಂಡಳಿ ಸದಸ್ಯರು, ಪ್ರಧಾನ ಅರ್ಚಕರಾದ ಗೋವಿಂದ ಭಟ್ ಕಾಂಚೋಡು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಗಂಗಾಧರ ಎಂ, ಗೌರವಾಧ್ಯಕ್ಷರಾದ ಅಶೋಕ್ ಶೆಟ್ಟಿ ಅರ್ಚನಾ, ಸಂಚಾಲಕರಾದ ರಾಮಪ್ರಸಾದ ಕಾಂಚೋಡು, ಕಾರ್ಯದರ್ಶಿ ರಾಧಾಕೃಷ್ಣ ಕೊಳೆಂಜಿಕೋಡಿ, ಜೊತೆ ಕೋಶಾಧಿಕಾರಿ ದಿನೇಶ್ ರೈ ದೇರಂಪಾಲು, ಗೌರವ ಸಲಹೆಗಾರರಾದ ಶ್ರೀನಾಥ್ ರೈ ದೋಳ್ತೋಡಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷರಾದ ಎಂ.ಕೂಸಪ್ಪ ಗೌಡ ಮುಗುಪ್ಪು, ಎ.ಎಂ. ಸುಧಾಕರ ರೈ, ರವೀಂದ್ರ ರೈ ಟಪಾಲುಕಟ್ಟೆ ಸೇರಿದಂತೆ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು ಹಾಗೂ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.