ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

0

.

ಸುಳ್ಯದ ಪಯಸ್ವಿನಿ ಹೊಳೆಗೆ ಈಜಲು ಬಂದಿದ್ದ ಯುವಕರ ಪೈಕಿ ಯುವಕರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ಪುತ್ತೂರಿನ ಕೌಡಿಚ್ಚಾರು ಪರಿಸರದ ಆರು ಯುವಕರು ಕಾರಿನಲ್ಲಿ ಸುಳ್ಯಕ್ಕೆ ಬಂದು ಓಡಬಾಯಿ ತೂಗು ಸೇತುವೆ ಬಳಿ ಕಾರು ನಿಲ್ಲಿಸಿ ದೊಡ್ಡೇರಿಯವರೆಗೆ ಹೋಗಿ ಬಂದು ಬಳಿಕ ಪಯಸ್ವಿನಿ ನದಿಗೆ ಈಜಲೆಂದು ಇಳಿದಿದ್ದರು.

ಅವರಲ್ಲೋರ್ವ ನೀರುಪಾಲಾದಾಗ ರಕ್ಷಿಸಲು ಹೋದ ಮತ್ತೊಬ್ಬ ಕೂಡಾ ನೀರಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.

ಕೌಡಿಚ್ಚಾರಿನ ಜಿತೇಶ್ ಹಾಗೂ ಪ್ರವೀಣ್ ಮೃತಪಟ್ಟ ಯುವಕರು.
ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು ಸರಕಾರಿ ಆಸ್ಪತ್ರೆಗೆ ತರಲಾಯಿತು.

ಮೃತ ಪ್ರವೀಣ್ ಕೌಡಿಚಾರಿನ ಅಂಬಟೆಮೂಲೆ ಕೃಷ್ಣಪ್ಪ ನಾಯಕ್ ಮಗನಾಗಿದ್ದು, ಜಿತೇಶ್ ದೇರಳೆ ನಿವಾಸಿ ನಾರಾಯಣ ಅವರ ಪುತ್ರ.

ಇವರಿಬ್ಬರೂ ಯಂತ್ರದಲ್ಲಿ ಕಾಡು ಕಡಿಯುವ ಕೆಲಸ ಮಾಡುತ್ತಿದ್ದು, ಶನಿವಾರ ಕೆಡ್ಡಸದ ಪ್ರಯುಕ್ತ ಕೆಲಸಕ್ಕೆ ರಜೆ ಇದ್ದುದರಿಂದ ಗೆಳೆಯರೊಂದಿಗೆ ಸುಳ್ಯಕ್ಕೆ ಬಂದಿದ್ದರು.