ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ ಸಂಪನ್ನ

0

ಕೊಲ್ಲಮೊಗು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಗಡಿಕಲ್ಲು ಇಲ್ಲಿ ಫೆ. 15 ಮತ್ತು ಫೆ.16 ರಂದು
ಒತ್ತೆಕೋಲ ಉತ್ಸವ ವಿಜ್ರಂಭಣೆಯಿಂದ ನಡೆಯಿತು.
ಫೆ.15 ರ ಪ್ರಾತಃಕಾಲ ಅಗ್ನಿಕುಂಡ ಜೋಡಣೆ ಪ್ರಾರಂಭಮಾಡಲಾಯಿತು.


ಬೆಳಗ್ಗೆ ಗಣಪತಿ ಹೋಮ, ಉಗ್ರಾಣ ಮುಹೂರ್ತ‌ ನಡೆದು ಮಧ್ಯಾಹ್ನ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಸ್ಥಾನದಿಂದ ಭಂಡಾರ ತೆಗೆದು, ತೊಡಂಙಲ್ ನಡೆದು ಮೇಲೇರಿಗೆ ಅಗ್ನಿ ಸ್ಪರ್ಶ ನಡೆಸಲಾಯಿತು. ಅಗ್ನಿ ಸ್ಪರ್ಶ ಬಳಿಕ ಸ್ಥಳೀಯ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ರಾತ್ರಿ ಅಂಗನವಾಡಿ ಪುಟಾಣಿಗಳಿಂದ ಹಾಗೂ ಶಾಲಾವಿದ್ಯಾರ್ಥಿಗಳಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ದೈವದ ಕುಳ್ಚಾಟ ನಡೆಯಿತು.

ಬಳಿಕ ಗೆಳೆಯರ ಬಳಗ ಗಡಿಕಲ್ಲು ಇವರ ಪ್ರಾಯೋಜಕತ್ವದಲ್ಲಿ “ಸ್ಟಾರ್ ವಾಯ್ಸ್ ಮೆಲೋಡಿಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಜರುಗಿತು. ಫೆ. 16 ಬೆಳಗ್ಗೆ ಗಂಟೆ ಶ್ರೀ ದೈವದ ಅಗ್ನಿ ಪ್ರವೇಶ ನಡೆದು ಬಳಿಕ ದೈವದ ಬಾರಣೆ, ಮಾರಿಕಳ ನಡೆದು ಗುಳಿಗ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು. ಆಡಳಿತ ಮಂಡಳಿ ಅಧ್ಯಕ್ಷ ದಿನೇಶ್ ಮಡ್ತಿಲ, ಕಾರ್ಯದರ್ಶಿ ನಾರಾಯಣ ಪನ್ನೆ, ಉಪಾಧ್ಯಕ್ಷ ಲವಿತ್ ಪಡ್ಪು, ಸತೀಶ್ ಟಿ.ಎನ್, ಖಜಾಂಚಿ ಅನಂತರಾಮ ಮಣಿಯಾನ, ಜತೆ ಕಾರ್ಯದರ್ಶಿ ಪುರುಷೋತ್ತಮ ಗಡಿಕಲ್ಲು, ಆಡಳಿತ ‌ಮಂಡಳಿ ಸದಸ್ಯರುಗಳಾದ ವೆಂಕಟರಮಣ ‌ಕೊಪ್ಪಡ್ಕ, ಶ್ರೀಮತಿ ಶಾಲಿನಿ ನಾರಾಯಣ ಗಡಿಕಲ್ಲು, ಉಮೇಶ್ ಆಚಾರ್ಯ ಗಡಿಕಲ್ಲು ಕೊಲ್ಲಮೊಗ್ರು, ಶ್ರೀಮತಿ ಸುಕನ್ಯಾ ಶಂಭಯ್ಯ ಭಟ್ ಕಂಜರ್ಪಣೆ ಗಡಿಕಲ್ಲು, ಗೋಪಾಲ ಗೌಡ ಕೊಪ್ಪಡ್ಕ ಹಾಗೂ ವಿವಿಧ ಸಮಿತಿವರು, ಊರ ಭಕ್ತರು, ವಿಶೇಷವಾಗಿ ಗೆಳೆಯರ ಬಳಗ ಗಡಿಕಲ್ಲು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.