ದೇವಚಳ್ಳ ಶಾಲೆಯ ತೆಂಗಿನಮರದಿಂದ ಬೊಂಡ ಕಡಿದು ಕುಡಿದ ಖದೀಮರು

0

ಕೊರಗಜ್ಜ ದೈವಕ್ಕೆ ಮೊರೆ ಹೋದ ಶಾಲಾ ಮೇಲುಸ್ತುವಾರಿ ಸಮಿತಿ

ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತೆಂಗಿನ ಮರದಿಂದ ನೂರಾರು ಬೊಂಡ ಕಿತ್ತು ಕುಡಿದ ಘಟನೆ ಇಂದು ಬೆಳಕಿಗೆ ಬಂದಿದೆ.

ಶಾಲೆಯ ಆವರಣದಲ್ಲಿದ್ದ ತೆಂಗಿನ ಮರದಿಂದ ನೂರಾರು ಬೊಂಡಗಳನ್ನು ಯಾರೋ ಖದೀಮರು ಕದ್ದು ಕಿತ್ತು ಕುಡಿದಿದ್ದಾರೆ. ಶಾಲೆಯ ಬಿಸಿಯೂಟ ಸೇರಿದಂತೆ ಇತರ ಖರ್ಚಿಗೆ ತೆಂಗಿನ ಕಾಯಿಗಳನ್ನು ಉಪಯೋಗಿಸಲಾಗುತ್ತಿತ್ತು. ಇದೀಗ ನೂರಾರು ಬೊಂಡಗಳನ್ನು ಕದ್ದು ಕುಡಿದಿರುವುದರಿಂದ ಶಾಲೆಗೂ ನಷ್ಟ ಉಂಟಾಗಿದೆ.


ಈ ಘಟನೆ ಇಂದು ಬೆಳಕಿಗೆ ಬಂದಿದ್ದು, ಶಿವರಾತ್ರಿಯ ದಿನ ಯಾರೋ ಖದೀಮರು ಈ ರೀತಿ ಮಾಡಿದ್ದು, ಶಾಲಾ ಮೇಲುಸ್ತುವಾರಿ ಸಮಿತಿಯವರು ಈ ಬಗ್ಗೆ ಕೊರಗಜ್ಜಗನಿಗೆ ಹರಕೆ ಹೇಳುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.