ಕೇನ್ಯ: ಕಬಡ್ಡಿ ಪಂದ್ಯಾಟ

0


ಕೇನ್ಯ ಗ್ರಾಮದ ಕಾಯಂಬಾಡಿ ನಾಗಬ್ರಹ್ಮ ಮುಗೇರ್ಕಳ ದೈವಸ್ಥಾನ ದ ವಠಾರದಲ್ಲಿ ಫೆ. 19ರಂದು 65 ಕೆ.ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಿತು.
ಪಂದ್ಯಾಟವನ್ನು ನಿವೃತ್ತ ತಹಶೀಲ್ದಾರ್ ತಮ್ಮಯ್ಯ ಗೌಡ ಗೆಜ್ಜೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸತ್ಯನಾರಾಯಣ ಭಟ್ ಕಾಯಂಬಾಡಿ, ರಾಜೀವ್ ಗೌಡ ಕಣ್ಕಲ್, ಶ್ರೀಮತಿ ಕುಸುಮ ಎಸ್ ರೈ ಕೇನ್ಯ ಹೊಸಮನೆ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಶಿವಪ್ರಸಾದ್ ರೈ ಮೈಲೇರಿ, ಭರತ ಕೊಳಂಬೆ, ಕ್ಲಬ್ ನ ಅಧ್ಯಕ್ಷರಾದ ವೆಂಕಪ್ಪ ಗೌಡ ಕಾಯಂಬಾಡಿ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸುಂತಾರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸತಾಯುಷಿ ಶ್ರೀಮತಿ ರಾಮಕ್ಕ ಅತ್ಲಾಜೆ, ಶ್ರೀಮತಿ ಲಕ್ಷ್ಮಿ ಪೂಜಾರಿ, ಪರಮೇಶ್ವರ ಆಚಾರ್ಯ ಪೇರಳಕಟ್ಟೆಯವರನ್ನು ಸನ್ಮಾನಿಸಲಾಯಿತು. ಉದಯ ಅಮ್ಮಣ್ಣಾಯ ಕೇನ್ಯ ಕಬಡ್ಡಿ ಅಂಕಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕೇನ್ಯ, ನೇಲ್ಯಡ್ಕ, ಕಣ್ಕಲ್ ಶಾಲಾ ಮಕ್ಕಳಿಂದ ಪ್ರದರ್ಶನ ಪಂದ್ಯ ನಡೆಯಿತು. ದೇವಿಪ್ರಸಾದ್ ರೈ ಗೆಜ್ಜೆ ಸ್ವಾಗತಿಸಿ, ಪ್ರಶಾಂತ್ ಕಾಯಂಬಾಡಿ ವಂದಿಸಿದರು. ಯುವರಾಜ್ ಕಣ್ಕಲ್ ಕಾರ್ಯಕ್ರಮ ನಿರೂಪಿಸಿದರು.