ಪಂಜಿಗಾರು : ಕೆರೆಗೆ ಬಿದ್ದು ಮಹಿಳೆ ಮೃತ್ಯು

0

ಬಾಳಿಲ ಗ್ರಾಮದ ಪಂಜಿಗಾರಿನಲ್ಲಿ ಮಹಿಳೆಯೋರ್ವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಫೆ.20 ರಂದು ನಡೆದಿದೆ.
ಪಂಜಿಗಾರು ದಿ.ಪ್ರಭಾಕರ ನಾಯಕ್ ಎಂಬವರ ಪತ್ನಿ ಶ್ರೀಮತಿ ಶ್ರೀಲತಾ (72) ಎಂಬವರು ಮನೆಯ ಸಮೀಪದ ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಮೃತರು ಪುತ್ರ ರಾಜೇಶ್ ಪಂಜಿಗಾರು,ಪುತ್ರಿಯರಾದ ಶ್ರೀಮತಿ ವಿದ್ಯಾ,ಶ್ರೀಮತಿ ವೀಣಾ ,ಅಳಿಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ‌