ಗಿರೀಶ್ ಭಾರದ್ವಾಜ್ ರಿಗೆ ವರ್ಷದ ಕನ್ನಡಿಗ ಪ್ರಶಸ್ತಿ

0

ಟಿವಿ 18 ಗ್ರೂಪ್‌ನ ನ್ಯೂಸ್ 18 ಕನ್ನಡ ವಾಹಿನಿ ನೀಡುವ ‘ವರ್ಷದ ಕನ್ನಡಿಗ’ ಪ್ರಶಸ್ತಿಗೆ ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಅವರು ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಿರೀಶ್ ಭಾರದ್ವಾಜ್ ಅವರಿಗೆ ‘ವರ್ಷದ ಕನ್ನಡಿಗ ಪ್ರಶಸ್ತಿ 2023’ ಪ್ರಧಾನ ಮಾಡಿದರು. ಡಾ.ಗಿರೀಶ್ ಭಾರದ್ವಾಜ್, ಚಲನಚಿತ್ರ ನಟ ಶ್ರೀನಾಥ್, ಸಾಹಿತಿ ಮಹಮ್ಮದ್ ಕುಂಞಿ ಬೊಳ್ವಾರ್ ಸೇರಿದಂತೆ ವಿವಿಧ ಕ್ಷೇತ್ರದ 7 ಮಂದಿ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನೂರ ಮೂವತ್ತಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿ ತೂಗು ಸೇತುವೆಗಳ ಸರದಾರ ಎನಿಸಿಕೊಂಡ, ಹಳ್ಳಿಗಳನ್ನು ಬೆಸೆಯುವ ಮೂಲಕ ಜನರ ಬದುಕನ್ನು ಜೋಡಿಸಿದ ಸಾಧನೆಯನ್ನು ಪರಿಗಣಿಸಿ ಡಾ.ಗಿರೀಶ್ ಭಾರದ್ವಾಜ್ ಅವರಿಗೆ ವರ್ಷದ ಕನ್ನಡಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.