ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಅಧ್ಯಯನ ಪ್ರವಾಸ

0


ಪ್ರವಾಸೋದ್ಯಮ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದ್ದು,ಇಂದು ಬೆಳಿಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ 2 ಬಸ್ ಗಳಲ್ಲಿ ತೆರಳಿದರು.


ಸುಳ್ಯ ತಾಲೂಕಿನ ಸರಕಾರಿ ಪ್ರೌಢಶಾಲೆಗಳ 67ಮಂದಿ ಆಯ್ದ ವಿದ್ಯಾರ್ಥಿಗಳು ಮತ್ತು 3 ಶಿಕ್ಷಕರು ಪ್ರವಾಸದಲ್ಲಿ ಭಾಗವಹಿಸಿದರು.ನಾಲ್ಕು ದಿನಗಳ ಪ್ರವಾಸದಲ್ಲಿ ಪ್ರೇಕ್ಷಣೀಯ ಸ್ಥಳಗಳಾದ ಬೇಲೂರು,ಹಳೆಬೀಡು, ಶ್ರವಣಬೆಳಗೊಳ,ಮೈಸೂರು,ಬೆಂಗಳೂರು ಮೊದಲಾದ ಕಡೆಗಳನ್ನು ಸಂದರ್ಶಿಸಲಾಗುತ್ತದೆ.


ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಮತಿ ವೀಣಾ ಶುಭಾಹಾರೈಸಿ,ಬೀಳ್ಕೊಟ್ಟರು.ದೈ.ಶಿ.ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆಯಿಂದ ಮಕ್ಕಳಿಗೆ ಟಿ.ಶರ್ಟ್,ಕ್ಯಾಪ್,ಪುಸ್ತಕ, ಪೆನ್ ಒಳಗೊಂಡ ಬ್ಯಾಗ್ ನೀಡಿದರು.