ಜೋಗಿಬೆಟ್ಟು ಕಾಲು ಸಂಕ ನಿರ್ಮಾಣಕ್ಕೆ ಗುದ್ದಲಿ ಪೂಜೆ

0

ಮುಪ್ಪೇರ್ಯ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕಾಲುಸಂಕ ನಿರ್ಮಾಣಕ್ಕೆ ಸಚಿವ ಎಸ್.ಅಂಗಾರರವರು ರೂ.16 ಲಕ್ಷ ಅನುದಾನ ಮಂಜೂರು ಮಾಡಿದ್ದು ಕಾಮಗಾರಿಗೆ ಗುದ್ದಲಿ ಪೂಜೆಯು ಫೆ.28 ರಂದು ನಡೆಯಿತು.


ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಗುದ್ದಲಿ ಪೂಜೆ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಉಪಾಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತ ಚಾಕೋಟೆಡ್ಕ ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ, ಸದಸ್ಯರಾದ ಹರ್ಷ ಜೋಗಿಬೆಟ್ಟು, ಪಾವನ ಜೋಗಿಬೆಟ್ಟು, ರವೀಂದ್ರ ರೈ ಟಪ್ಪಾಲುಕಟ್ಟೆ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ಚಂದ್ರ, ಬೂತ್ ಅಧ್ಯಕ್ಷರಾದ ತಾರಾನಾಥ ಬದಿವನ, ಸ್ಥಳೀಯರಾದ ಸೀತಾರಾಮ ಕಾಯಾರ, ವಸಂತ ಕೆ.ಡಿ, ಕೊರಗಪ್ಪ ನಾಯ್ಕ, ಶೇಷಪ್ಪ ಜೋಗಿಬೆಟ್ಟು, ಯಶೋಧ ಜೋಗಿಬೆಟ್ಟು, ಕೃಷ್ಣಪ್ಪ , ನಾರಾಯಣ ಭಟ್, ಸದಾಶಿವ ಭಟ್, ಜೆ.ಗೋವಿಂದಯ್ಯ, ಶ್ರೀನಿವಾಸ , ಓಡಿಯಪ್ಪ,ದಾಮೋದರ , ಧರ್ಮಪಾಲ ಜೋಗಿಬೆಟ್ಟು ,ಶಿವಣ್ಣ ಗೌಡ, ಕಾಂಟ್ರಾಕ್ಟರ್ ಶ್ರೀಧರ್ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.