ನೆಹರು ಮೆಮೋರಿಯಲ್ ಕಾಲೇಜಿಗೆ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಪರೀಕ್ಷೆಯಲ್ಲಿ ತ್ರಿವಳಿ ರ್‍ಯಾಂಕ್

0


ಮಂಗಳೂರು ವಿಶ್ವವಿದ್ಯಾನಿಲಯದ 2021-22 ನೇ ಸಾಲಿನ ಎಂ.ಎಸ್.ಡಬ್ಲ್ಯೂ (ಮಾಸ್ಟರ್ ಆಫ್ ಸೋಶಿಯಲ್ ವರ್ಕ್) ಸ್ನಾತಕೋತ್ತರ ಪರೀಕ್ಷೆಯಲ್ಲಿ ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿನಿ ಶ್ರೀನಾ.ಪಿ ಪ್ರಥಮ ರ್‍ಯಾಂಕ್, ಮಾಳವಿಕಾ.ಸಿ ದ್ವಿತೀಯ ರ್‍ಯಾಂಕ್ ಹಾಗೂ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ (ಎಂ.ಕಾಂ) ಪವಿತ್ರ.ಕೆ ಇವರು ಹತ್ತನೇ ರ್‍ಯಾಂಕ್ ಪಡೆದಿರುತ್ತಾರೆ.
ಕು. ಶ್ರೀನಾ.ಪಿ ಇವರು ಕೇರಳದ ಕಯ್ಯೂರ್ ನಿವಾಸಿಗಳಾದ ಕುಂಞ ಕೃಷ್ಣನ್ ಹಾಗೂ ಬಿಂದು.ಕೆ.ಕೆ ಇವರ ಪುತ್ರಿ. ಕು. ಮಾಳವಿಕ.ಸಿ ಇವರು ಚೆರುವತ್ತೂರು ನಿವಾಸಿ ಪದ್ಮನಾಭನ್.ಸಿ. ಹಾಗೂ ವಿಮಲ ಸಿ. ದಂಪತಿಗಳ ಪುತ್ರಿ ಹಾಗೂ ಪವಿತ್ರ ಕೆ. ಇವರು ಚಂದ್ರಶೇಖರ್ ಗೌಡ ಹಾಗೂ ಗಿರಿಜಾ ದಂಪತಿಗಳ ಪುತ್ರಿ. ಪಿಂಡಿಮನೆ ಓಂಪ್ರಸಾದ್ ಇವರ ಪತ್ನಿ. ನೆಹರೂ ಮೆಮೋರಿಯಲ್ ಕಾಲೇಜಿಗೆ ಹಾಗೂ ಆಡಳಿತ ಮಂಡಳಿಗೆ ಕೀರ್ತಿ ತಂದಿರುತ್ತಾರೆ.