ಮಾ.11 ರಂದು ಸುಳ್ಯಕ್ಕೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆಗಮನ

0

ಸುಳ್ಯದಲ್ಲಿ ಅದ್ದೂರಿ ರೋಡ್ ಶೋ : 8 ಸಾವಿರ ಕಾರ್ಯಕರ್ತರು ಭಾಗಿ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾ.11 ರಂದು ಸುಳ್ಯಕ್ಕೆ ಅಪರಾಹ್ನ 2.30ಕ್ಕೆ ಆಗಮಿಸಲಿದ್ದು ಸುಳ್ಯದಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ ಎಂದು ಸಚಿವ ಎಸ್.ಅಂಗಾರ ಹಾಗೂ ಬಿಜೆಪಿ‌ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ.

ಮಾ.9ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದ್ದು, ಮಾ.11 ರಂದು ಸುಳ್ಯಕ್ಕೆ ಬರಲಿದೆ. ಬೆಳಗ್ಗೆ ಸಂಪಾಜೆಯಲ್ಲಿ‌ ವಿಜಯ ಸಂಕಲ್ಪ ಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು. ಅಲ್ಲಿಂದ ಮದ್ಯಾಹ್ನ 2.30 ಕ್ಕೆ ಸುಳ್ಯ ವಿಷ್ಣು ಸರ್ಕಲ್ ಗೆ ವಿಜಯ ಸಂಕಲ್ಪ ಯಾತ್ರೆ ಬರಲಿದ್ದು ಅಲ್ಲಿಂದ ನಗರದಲ್ಲಿ ರೋಡ್ ಶೋ ನಡೆಯಲಿದೆ.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವ ವಿ.ಸುನಿಲ್ ಕುಮಾರ್ ಸಹಿತ ಪ್ರಮುಖರು ಭಾಗವಹಿಸಲಿದ್ದಾರೆ. ಈ ರೋಡ್ ಶೋ ಕಾರ್ಯಕ್ರಮ ಕ್ಕಾಗಿ ಈಗಾಗಲೇ ಎಲ್ಲ ಬೂತ್ ಮಟ್ಟದಲ್ಲಿಯೂ ಸಭೆಗಳಾಗಿವೆ. 8 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ.ತೀರ್ಥರಾಮ,ವೆಂಕಟ್ ದಂಬೆಕೋಡಿ,
ವೆಂಕಟ್ ವಳಲಂಬೆ, ಕು.ಭಾಗೀರಥಿ ಮುರುಳ್ಯ, ರಾಕೇಶ್ ಕೆಡೆಂಜಿ, ಸುಬೋಧ್ ಶೆಟ್ಟಿ ‌ಮೇನಾಲ, ತೇಜಸ್ವಿನಿ ಕಟ್ಟಪುಣಿ, ಸುನಿಲ್ ಕೇರ್ಪಳ ಉಪಸ್ಥಿತರಿದ್ದರು.