ಸುಬ್ರಹ್ಮಣ್ಯ: ದೇವಿಕಾ ಕಾರ್ ವಾಷ್ ಸೆಂಟರ್ ಶುಭಾರಂಭ

0

ಸುಬ್ರಹ್ಮಣ್ಯದ ಪರ್ವತ ಮಕ್ಕಿ ಬಳಿ ಸೋಮಸುಂದರ ಹೊಸೋಳಿಕೆ ಮಾಲಕತ್ವದ ಕಾರ್ ವಾಷ್ ಮತ್ತು ಸರ್ವಿಸ್ ಸೆಂಟರ್ ಮಾ. 9ರಂದು ಶುಭಾರಂಭಗೊಂಡಿತು. ಸುಬ್ರಹ್ಮಣ್ಯ ಕ್ಷೇತ್ರದ ನಿಕಟಪೂರ್ವ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸೋಮಸುಂದರ್ ರವರ ತಾಯಿ ಶ್ರೀಮತಿ ಅಮ್ಮಣಿ, ಸಹೋದರಿ ಯಶಸ್ವಿನಿ, ಉದ್ಯಮಿ ಡಾ. ರವಿ ಕಕ್ಕೆಪದವು, ಉದಯ ಶೆಟ್ಟಿ, ನಿವೃತ್ತ ಯೋಧ ಕೆಂಚಪ್ಪ ಗೌಡ, ದಿನಕರ, ಹರ್ಷ, ಮೋಕ್ಷಿತ್, ರಮೇಶ್, ಯಶೋಧರ, ಶ್ರೀಮತಿ ಲಕ್ಷ್ಮೀ, ಶ್ರೀಮತಿ ಭಾರತಿ, ಶ್ರೀಮತಿ ಸೀತಮ್ಮ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.