ಎಣ್ಮೂರು : ನೇಮೋತ್ಸವ ಪ್ರಯುಕ್ತ ಶ್ರಮದಾನ

0

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿಬೈದರುಗಳ ನೇಮೋತ್ಸವವು ಏಪ್ರಿಲ್ ೫ರಂದು ನಡೆಯಲಿದ್ದು, ಆ ಪ್ರಯುಕ್ತ ಮಾರ್ಚ್ ೧೨ರಂದು ಗರಡಿಯಲ್ಲಿ ಸ್ವಚ್ಛತೆಯ ಮೂಲಕ ಶ್ರಮದಾನ ಮಾಡಲಾಯಿತು.


ಗರಡಿಯ ಒಳಾಂಗಣ, ಹೊರಾಂಗಣದಲ್ಲಿದ್ದ ಕಸ ಕಡ್ಡಿ, ಗಿಡಗಂಟಿಗಳನ್ನು ತೆರೆವುಗೊಳಿಸಿ, ಪ್ರಥಮ ಹಂತವಾಗಿ ಶ್ರಮದಾನ ಮಾಡಲಾಯಿತು.
ಪ್ರತಿ ವಾರ ಶ್ರಮದಾನ ಇರುತ್ತದೆ ಎಂದು ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಅವರು ಹೇಳಿದರು.


ಈ ಸಂದರ್ಭದಲ್ಲಿ ನ್ಯಾಯವಾದಿ ರಾಧಾಕೃಷ್ಣ ರೈ ಕಟ್ಟಬೀಡು, ರಮೇಶ್ ಕೋಟೆ, ಎನ್.ಜಿ. ಲೋಕನಾಥ ರೈ, ಜಗನ್ನಾಥ ಶೆಟ್ಟಿ ಕುಲೈತೋಡಿ, ಸುಧೀರ್ ಕುಮಾರ್ ಶೆಟ್ಟಿ ಕೆ., ನಾಗೇಶ್ ಆಳ್ವ, ಎಣ್ಮೂರು ಒಕ್ಕೂಟದ ಅಧ್ಯಕ್ಷ ಪುಟ್ಟಣ್ಣ ಕೂಡ್ಲೆ, ಎಡಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಮಾಯಿಲಪ್ಪ ಗೌಡ ಎಣ್ಮೂರು, ಸುಜಿತ್ ರೈ ಕೆ. ಎಣ್ಮೂರು, ಒಡಿಯೂರು ಎಣ್ಮೂರು ಘಟಕ ಸಮಿತಿ ಸೇವಾ ದೀಕ್ಷಿತೆ ಜಾನಕಿ ಅನ್ನೋವು, ಸ್ಥಳೀಯ ಭಕ್ತಾದಿಗಳು, ಒಡಿಯೂರು ಸಂಘದ ಸದಸ್ಯರು, ಧರ್ಮಸ್ಥಳ ಎಣ್ಮೂರು ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.