ಅಜ್ಜಾವರದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗ್ಯಾರಂಟಿ ಕಾರ್ಡ್ ಬಿಡುಗಡೆ – ಸಮಾವೇಶ

0

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಜ್ಜಾವರ ವಲಯ ಸಮಿತಿ ವತಿಯಿಂದ ಆಯೋಜಿಸಲಾದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆ ಕಾರ್ಯಕ್ರಮ ಮಾ.13 ರಂದು ನಡೆಯಿತು.


ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ಅಧ್ಯಕ್ಷತೆ ವಹಿಸಿ “ಚುನಾವಣೆ ಹತ್ತಿರವಾಗುತ್ತಿದ್ದು ಸಿದ್ಧರಾಮಯ್ಯ ಸರಕಾರದ ಯೋಜನೆಯ‌ ಜತೆಗೆ, ಕಾಂಗ್ರೆಸ್ ನೀಡಿರುವ ಭರವಸೆಯನ್ನು‌ ಮನೆ ಮನೆಗೆ ತಿಳಿಸುವ ಕಾರ್ಯ ಮಾಡೋಣ” ಎಂದು‌ ಹೇಳಿದರು.

ಈ ಸಮಾವೇಶದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಳೆದ ಅವಧಿಯ ಸರ್ಕಾರ 160 ಆಶ್ವಾಸನೆಗಳಲ್ಲಿ 158 ಆಶ್ವಾಸನೆಗಳನ್ನು ಈಡೇರಿಸಿದ ಯಶಸ್ವಿ ಸರ್ಕಾರವಾಗಿದೆ. ಬಿಜೆಪಿಯವರು ಮಾಡಿರುವಂತಹ ಅನ್ಯಾಯಗಳನ್ನು ಬಹಿರಂಗಪಡಿಸಲು ಡಿ ಕೆ ಶಿವಕುಮಾರ್ ರವರು ಬಹಿರಂಗ ಚರ್ಚೆಗೆ ಆಹ್ವಾನಿಸಿದರೆ ಬಿಜೆಪಿಯವರಿಗೆ ಬರುವುದಕ್ಕೆ ಧೈರ್ಯವಿಲ್ಲ.


ಇದೀಗ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ನಾಯಕರುಗಳು ಅವರವರ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಈಗಾಗಲೇ ಕಾಂಗ್ರೆಸ್ ಪಕ್ಷದ ನಾಯಕರುಗಳು ನೀಡಿರುವಂತಹ ಭರವಸೆಯ ಯೋಜನೆಗಳಾದ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಗೃಹಿಣಿಗೆ 2000 ರೂಪಾಯಿಗಳ ಯೋಜನೆ, 10 ಕೆಜಿ ಅಕ್ಕಿ ಮೊದಲಾದ ಯೋಜನೆಯ ಗ್ಯಾರೆಂಟಿ ಕಾರ್ಡುಗಳನ್ನು ಹಂಚಿ ವಿಶ್ವಾಸವನ್ನು ನೀಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಕರೆ ನೀಡಿದರು.

ಪ್ರಧಾನ ಭಾಷಣಗಾರರಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ಪಕ್ಷದ ಕಾರ್ಯ ಚಟಿಕವಟಿಕೆಗಳಲ್ಲಿ ಪ್ರತಿಯೊಬ್ಬ ನಾಯಕರುಗಳು ಮತ್ತು ಕಾರ್ಯಕರ್ತರುಗಳು ತೊಡಗಿಸಿಕೊಂಡು ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಮನೆಮನೆಗೆ ಮುಟ್ಟಿಸಬೇಕೆಂದು ಹೇಳಿದರು.

ಸಮಾವೇಶದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪಗೌಡ, ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ಸುಳ್ಯ ಕ್ಷೇತ್ರ ಉಸ್ತುವಾರಿ ಕಮಲ್ಜಿತ್ ಕಣ್ಣೂರ್,ಕೆಪಿಸಿಸಿ ಸಂಯೋಜಕರಾದ ಎಚ್. ಎಂ.ನಂದಕುಮಾರ್, ಜಿ.ಕೃಷ್ಣಪ್ಪ, ಕೆಪಿಸಿಸಿ ಮಾಜಿ ಸದಸ್ಯ ಡಾ.ರಘು, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ.ಮುಸ್ತಫ, ಕೆ.ಗೋಕುಲದಾಸ್,ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಮಹಿಳಾ ಘಟಕ ಅಧ್ಯಕ್ಷೆ ಗೀತಾ ಕೊಲ್ಚಾ,ರ್ ಮತ್ತು ಎನ್ ಎಸ್ ಯು ಐ ಅಧ್ಯಕ್ಷ ಕೀರ್ತನ್ ಕೊಡೆಪಾಲ,ಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ, ಮಾಜಿ ಜಿ. ಪಂ. ಸದಸ್ಯೆ ರಾಜೀವಿ ರ್ ರೈ ಬೆಳ್ಳಾರೆ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಹಸೈನಾರ್ ಹಾಜಿ ಗೋರಡ್ಕ, ಮಾಜಿ ತಾ. ಪo. ಸದಸ್ಯ ತೀರ್ಥರಾಮ ಜಾಲ್ಸೂರು, ಕೆ ಸುಳ್ಯ, ಸುಜಯಕೃಷ್ಣ, ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲೀಲಾ ಮನಮೋಹನ, ಮಾಜಿ ಅಧ್ಯಕ್ಷ ಪ್ರಸಾದ ರೈ, ಸದಸ್ಯರಾದ ರಾಹುಲ್ ಅಡ್ಪಂಗಾಯ, ಜಯರಾಮ್, ದೇವಕಿ, ಗೀತಾ, ವಿಶ್ವನಾಥ್ ಅಜ್ಜಾವರ, ಶ್ವೇತಾ ಶಿರ್ವಾಜೆ,ಬೇಬಿ ಕಲ್ತಡ್ಕ, ಅಬ್ದುಲ್ಲ ಅಜ್ಜಾವರ, ಮಾಜಿ ತಾ. ಪo. ಸದಸ್ಯೆ ಅನಸೂಯ, ಕಾಂಗ್ರೆಸ್ ಧುರೀಣರುಗಳಾದ ರಂಜಿತ್ ಮೇನಾಲ, ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಮಾವಜಿ,
ಯುವ ಕಾಂಗ್ರೆಸ್ ಮಾಜಿ ಬೂತ್ ಅಧ್ಯಕ್ಷ ಖಾದರ್, ಶಶಿಧರ್ ಹೆಗ್ಡೆ, ಭವಾನಿಶಂಕರ್ ಕಲ್ಮಡ್ಕ, ಧರ್ಮಪಾಲ ಕೊಯಿಂಗಾಜೆ ಮೊದಲಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದ ನೂರಾರು ಮಂದಿ ಕಾರ್ಯಕರ್ತರು, ಮುಖಂಡರುಗಳು ಭಾಗವಹಿಸಿದ್ದರು. ಅಜ್ಜಾವರದ ಹಿರಿಯ ಕಾಂಗ್ರೆಸ್ಸಿಗರಿಗೆ ಗೌರವ ಸಲ್ಲಿಸಲಾಯಿತು.
ಶ್ರೀಮತಿ ಲೀಲಾ ಮನಮೋಹನ್ ಸ್ವಾಗತಿಸಿದರು. ‌ರಂಜಿತ್ ಮೇನಾಲ ವಂದಿಸಿದರು.
ಶ್ರೀಧರ್ ಮೇನಾಲ, ಗಂಗಾಧರ್ ಮೇನಾಲ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚೆಗೆ ನಿಧನರಾದ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ, ವಿಷ್ಣುರಾಜ್ ಮೇನಾಲರಿಗೆ ನುಡಿನಮನ ಸಲ್ಲಿಸಲಾಯಿತು.