ಕಲ್ಲುಗುಂಡಿ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

0

ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲವು ಮಾರ್ಚ್ 28 , 29ಮತ್ತು 30 ರಂದು ನಡೆಯಲಿದ್ದು, ಇದರ ಕೊಳ್ಳಿ ಕಡಿಯುವ ಕಾರ್ಯಕ್ರಮ ಇಂದು ನಡೆಯಿತು.


ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ಚಾವಡಿಯಿಂದ ಕೊಳ್ಳಿಯನ್ನು ಕಡಿದು ಒತ್ತೆಕೋಲ ಗದ್ದೆಗೆ ತರಲಾಯಿತು. ಈ ವೇಳೆ ಮಹಾವಿಷ್ಣುಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷರಾದ ಕೆ.ಜಿ. ರಾಜಾರಾಮ ಕೀಲಾರು, ಮೊಕ್ತೇಸರರಾದ ಕೆ .ಕರುಣಾಕರ, ಅಧ್ಯಕ್ಷರಾದ ಕೆ. ಆರ್ ಜಗದೀಶ್ ರೈ, ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.