ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯಿಂದ ಸುಮಲತಾ ಮರಿಕೇಯಿಯವರಿಗೆ ವೀಲ್ ಚಯರ್ ಹಸ್ತಾಂತರ

0

ಕೊಡಿಯಾಲ ಗ್ರಾಮದ ಮರಿಕೇಯಿ ಎಂಬಲ್ಲಿ ವಾಸವಿರುವ ಸುಮಲತಾ ರವರು ಪೆರುವಾಜೆ ಗ್ರಾಮದ ಶ್ರೀವಿಷ್ಣು ಸಂಘದ ಸದಸ್ಯರಾಗಿದ್ದು, ಇವರ ತಾಯಿವರಾದ ಗುಲಾಬಿ ಯವರು ಎದ್ದು ನಡೆಯಲಾಗದ ಅಸಹಾಯಕ ಸ್ಥಿತಿಯಲ್ಲಿದ್ದು, ಯೋಜನೆಯ ಜನಮಂಗಳ ಕಾರ್ಯಕ್ರಮದಡಿಯಲ್ಲಿ ನೀಡಲಾದ ವೀಲ್ ಚೇರನ್ನು ತಾಲೂಕಿನ ಯೋಜನಾಧಿಕಾರಿಗಳಾದ ನಾಗೇಶ್. ಪಿ ಯವರು ವಿತರಿಸಿದರು. ಈ ಸಂಧರ್ಭ, ಬೆಳ್ಳಾರೆ ಜನಜಾಗೃತಿ ವಲಯಧ್ಯಕ್ಷರಾದ ಆನಂದ ಗೌಡ, ವಲಯ ಮೇಲ್ವಿಚಾರಕರಾದ ವಸಂತ, ಎಲ್, ಸೇವಾಪ್ರತಿನಿಧಿ ಶ್ರೀಮತಿ ಯಶೋಧ, ಒಕ್ಕೂಟ ಅಧ್ಯಕ್ಷರಾದ ಸುಂದರ ನಾಯ್ಕ, ಪಧಾಧಿಕಾರಿಗಳು, ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.