ಎಸ್ ಜೆ ಎಂ ಸುಳ್ಯ ರೇಂಜ್ ಜಲ್ಸತುಲ್ ವಿದಾಯ ಹಾಗೂ ಮದರಸ ಅಧ್ಯಾಪಕರಿಗೆ ರಮಳಾನ್ ಕಿಟ್ ವಿತರಣೆ

0


ಸುನ್ನಿ ಜಂಯ್ಯತುಲ್ ಮುಅಲ್ಲಿಮೀನ್ ಸುಳ್ಯ ರೇಂಜ್ ಇದರ ವತಿಯಿಂದ ಗತ ವರ್ಷದಲ್ಲಿ ಸೇವೆಗೈದ ಮದರಸ ಅಧ್ಯಾಪಕರನ್ನು ಬಿಳ್ಕೊಡುವ ಕಾರ್ಯಕ್ರಮ ಹಾಗೂ ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ಗಾಂಧಿನಗರ ಇದರ ಸಭಾಂಗಣದಲ್ಲಿ ಮಾ.15 ರಂದು ನಡೆಯಿತು.


ಕಾರ್ಯಕ್ರಮವನ್ನು ದುವಾಶಿರ್ವಚನ ಮೂಲಕ ಎಸ್ ಜೆ ಎಂ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರ್ ಉದ್ಘಾಟಿಸಿದರು.
ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಕ್ಷ ಮಹಮ್ಮದ್ ಸಖಾಫಿ ಮೊಗರ್ಪಣೆ ಅಧ್ಯಕ್ಷತೆ ವಹಿಸಿದ್ದರು.
ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ, ಎಸ್ ಎಂ ಎ ಸುಳ್ಯ ಅಧ್ಯಕ್ಷ ಹಮೀದ್ ಬೀಜಕೊಚ್ಚಿ,ಎಸ್ ಎಂ ಎ ಸುಳ್ಯ ಕೋಶಾಧಿಕಾರಿ ಲತೀಫ್ ಹರ್ಲಡ್ಕ, ಅನ್ಸಾರಿಯ ಎಜುಕೇಶನ್ ಸೆಂಟರ್ ಗಲ್ಫ್ ಕೊಆರ್ಡಿನೇಟರ್ ಹಾಜಿ ಎಸ್ ಎಂ ಹಮೀದ್, ಎಸ್‌ ವೈ ಎಸ್ ಸುಳ್ಯ ಝೋನ್ ಕೋಶಾಧಿಕಾರಿ ಸಿದ್ದೀಕ್ ಕಟ್ಟೆಕ್ಕಾರ್, ಎಸ್ ಎಂ ಎ ವೆಲ್ಪೇರ್ ಅಧ್ಯಕ್ಷ ಅಬೂಭಕ್ಕರ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಎಸ್ ಎಂ ಎ ಪ್ರಧಾನ ಕಾರ್ಯದರ್ಶಿ ನಿಜಾರ್ ಸಖಾಫಿ ಸ್ವಾಗತಿಸಿ, ಕೋಶಾಧಿಕಾರಿ ಶಾಹುಲ್ ಹಮೀದ್ ಸಖಾಫಿ ವಂದಿಸಿದರು.