ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ ಹರಿಹರ ಪಲ್ಲತ್ತಡ್ಕ ಘಟಕದ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮ

0

ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ ಬಿ ಎಮ್ ಎಸ್ ಸಂಯೋಜಿತ ಶಿವಹರಿ ಅಟೋ ಚಾಲಕರ ಸಂಘ(ರಿ) ಹರಿಹರ ಪಲ್ಲತ್ತಡ್ಕ ಘಟಕ ಇದರ ವಾರ್ಷಿಕ ಮಹಾಸಭೆ ಹಾಗು ಪದಗ್ರಹಣ ಕಾರ್ಯಕ್ರಮ ಮಾ.15ರಂದು ಶ್ರೀ ಹರಿಹರೇಶ್ವರ ಸಭಾ ಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಶಿವಹರಿ ಅಟೋ ಚಾಲಕರ ಸಂಘದ ಅದ್ಯಕ್ಷರಾದ ದಯನಂದ ಪರಮಲೆ ವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ರಾಧಕೃಷ್ಣ ಬೈತಡ್ಕ, ಹಾಗು ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ ರವರು ಹಾಜರಿದ್ದರು.


ನಂತರ ಪದಗ್ರಹನ ಕಾರ್ಯಕ್ರಮದಲ್ಲಿ ಸಮಿತಿಯ ನೂತನ ಅದ್ಯಕ್ಷರಾಗಿ ದಯನಂದ ಪರಮಲೆ,ಕಾರ್ಯದರ್ಶಿ ‌ಯಾಗಿ ಲೊಕೇಶ್ ರಾಗಿಯಡ್ಕ,ಸಂಘಟನ ಕಾರ್ಯದರ್ಶಿಯಾಗಿ ಮಧು ಗೋಳ್ಯಾಡಿ ಹಾಗು ಸದಸ್ಯರು‌ಗಳನ್ನು ಪುನರ್‌ ಆಯ್ಕೆ ಮಾಡಲಾಯಿತು. ರಾಕೇಶ್ ಬೆಂಡೋಡಿ ಸ್ವಾಗತಿಸಿ, ದಯನಂದ ಪರಮಲೆ ಧನ್ಯವಾದಗೈದರು.