ಕನಕಮಜಲು: ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಗೊನೆ ಮುಹೂರ್ತ

0

ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.24ರಿಂದ ಮಾ.26ರವರೆಗೆ ಜರುಗಲಿದ್ದು, ದೈವಂಕಟ್ಟು ಮಹೋತ್ಸವಕ್ಕೆ ಮಾ.16ರಂದು ಮುಹೂರ್ತದ ಗೊನೆ ಕಡಿಯಲಾಯಿತು.


ಈ ಸಂದರ್ಭದಲ್ಲಿ ಅಡ್ಕಾರು ತರವಾಡು ಕುಟುಂಬದ ಮೊಕ್ತೇಸರ ಅಡ್ಕಾರು ಕುಟುಂಬದ ಮುತ್ತಪ್ಪ ಗೌಡ, ಕೃಷ್ಣಪ್ಪ ಗೌಡ, ದೈವಂಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಮಾಸ್ತರ್ ಬೊಮ್ಮೆಟ್ಟಿ, ಕಾರ್ಯಾಧ್ಯಕ್ಷ ಎಲ್ಯಣ್ಣ ಗೌಡ ಕಾರಿಂಜ, ಆಡಳಿತ ಸಮಿತಿ ಅಧ್ಯಕ್ಷ ಸೀತಾರಾಮ ಗೌಡ ಬುಡ್ಲೆಗುತ್ತು, ಪ್ರಧಾನ ಕಾರ್ಯದರ್ಶಿ ಎನ್.ಜಿ. ಚಂದ್ರಶೇಖರ, ಖಜಾಂಜಿ ತೇಜ ಪ್ರಕಾಶ್ ಬುಡ್ಲೆಗುತ್ತು, ನೇತ್ರಕುಮಾರ ಪೇರೋಳಿ , ನಂಗಾರು ತರವಾಡು ಮೊಕ್ತೇಸರ ಮೋಹನ ನಂಗಾರು, ಉಪಾಧ್ಯಕ್ಷ ರಾಮಚಂದ್ರ ಗೌಡ ಬುಡ್ಲೆಗುತ್ತು, ಐ.ಕೆ. ಹೇಮಚಂದ್ರ ಕದಿಕಡ್ಕ, ಸುರೇಶ್ ಕುದ್ಕುಳಿ, ಆನಂದ ಬಾಳೆಹಿತ್ತಿಲು, ಪ್ರಕಾಶ ಬಾಳೆಹಿತ್ತಿಲು, ನಾಗೇಶ್ ಬಾಳೆಹಿತ್ತಿಲು, ಗೋಪಾಲ ಮಣಿಯಾಣಿ ದೇರ್ಕಜೆ, ರಾಮಣ್ಣ ನಾಯ್ಕ ಕುದ್ಕುಳಿ, ದಿವಾಕರ ಕಾಳಪ್ಪಜ್ಜನಮನೆ, ರಾಮಚಂದ್ರ ಬೊಮ್ಮೆಟ್ಟಿ, ರಾಕೇಶ್ ಅಡ್ಕಾರು, ವಾಸುದೇವ ಪೆರುಂಬಾರು, ಕೃಷ್ಣ ಗುರಿಯಡ್ಕ, ಶಿವಪ್ರಸಾದ್ ಅಡ್ಕಾರು, ಭಾಸ್ಕರ ಉಗ್ಗಮೂಲೆ, ರೋಷನ್ ಬಾಳೆಹಿತ್ತಿಲು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.