ವಿಜೃಂಭಣೆಯಿಂದ ನಡೆದ ಕಳಂಜ ಒತ್ತೆಕೋಲ

0

ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಕಳಂಜ ವತಿಯಿಂದ ಕಳಂಜ ಒತ್ತೆಕೋಲವು ಮಾ.19 ಮತ್ತು ಮಾ.20 ರಂದು ನಡೆಯಿತು.
ಮಾ.19 ರಂದು ಸಂಜೆ ಸ್ಥಾನದಿಂದ ಭಂಡಾರ ತೆಗೆಯಲಾಯಿತು. ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕುಳಿಚಟ್ಟು ನಡೆಯಿತು.
ರಾತ್ರಿ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ಮತ್ತು ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಹಾಗೂ
ಭಜನೆ, ಕುಣಿತ ಭಜನೆ ನಡೆಯಿತು.


ನಾಳ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ತುಳು ಯಕ್ಷಗಾನ ಉಳ್ಳಾಲ್ತಿನ ಕಾರ್ಣಿಕ ನಡೆಯಿತು.

ಮಾ.20 ರಂದು ಪ್ರಾತ:ಕಾಲ ದೈವದ ಅಗ್ನಿಪ್ರವೇಶ ನಡೆಯಿತು. ಬೆಳಿಗ್ಗೆ ಮಾರಿಕಳ ನಂತರ ಪ್ರಸಾದ ವಿತರಣೆ ನಡೆಯಿತು.
ನಂತರ ಮುಳ್ಳು ಗುಳಿಗ ದೈವದ ನೇಮ ನಡೆಯಿತು.


ಈ ಸಂದರ್ಭದಲ್ಲಿ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ರಘುನಾಥ ರೈ ಕಳಂಜ, ಅಧ್ಯಕ್ಷ ಲಕ್ಷ್ಮೀಶ ರೈ ಗುರಿಕ್ಕಾನ, ಉಪಾಧ್ಯಕ್ಷ ದಯಾನಂದ ಕಳಂಜ, ಕಾರ್ಯದರ್ಶಿ ಶೇಷಪ್ಪ ಗೌಡ ಕುಕ್ಕುತ್ತಡಿ, ಜೊತೆ ಕಾರ್ಯದರ್ಶಿ ನಾರಾಯಣ ಕಳಂಜ, ಖಜಾಂಜಿ ರಾಜೇಶ್ ಅಮೀನ್ ಪಟ್ಟೆ ಮತ್ತು ಟ್ರಸ್ಟ್ ನ ಸರ್ವ ಸದಸ್ಯರು ಹಾಗೂ ಊರವರು ಮತ್ತು ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.