ಅರಂತೋಡು ಅರಮನೆಗಯದ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾದ ಸಂಪರ್ಕ ಸೇತುವೆಗೆ ಈ ವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವಬಗ್ಗೆ ಬೇಸರಗೋಡು ಈ ಭಾಗದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ ಎಂದು ತಿಳಿದು ಬಂದಿದೆ.
ತೆಂಗಿನ ಮರ, ಅಡಿಕೆ ಮರದ ತುಂಡುಗಳಿಂದ ನಿರ್ಮಿಸಲಾದ ತೂಗು ಸೇತುವೆಯೊಂದೇ ಇಲ್ಲಿನ ಸಂಪರ್ಕ ಸೇತುವೆಯಾಗಿದ್ದು ಅದು ಮುರಿದು ಬೀಳುವ ಸ್ಥಿತಿಯಲ್ಲಿದ್ದು ಪ್ರತೀ ದಿನ ಮನೆಗೆ, ಶಾಲೆಗೆ ತೆರಳುವ ನಾಗರಿಕರು, ವಿದ್ಯಾರ್ಥಿಗಳು ಜೀವ ಕೈಯ್ಯಲ್ಲಿ ಹಿಡಿದು ತೆರಳಬೇಕಾದ ಪರಿಸ್ಥಿತಿ ಕಳೆದ ೨೫ ವರ್ಷಗಳಿಂದ ನಿರ್ಮಾಣವಾಗಿದೆ.
ಪ್ರತೀ ಬಾರಿಯೂ ಆಶ್ವಾಸನೆ ನೀಡುವ ಜನಪ್ರತಿನಿಧಿಗಳು ಚುನಾವಣೆ ಗೆದ್ದ ಬಳಿಕ ಇತ್ತ ಗಮನ ಹರಿಸುವುದಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಳವಡಿಸಿರುವ ಬ್ಯಾನರಿನಲ್ಲಿ ಉಲ್ಲೇಖಿಸಿದ್ದಾರೆ.