ನಡುತೋಟ ಶಿರಾಡಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

0

ಬಿಳಿನೆಲೆ ಕೈಕಂಬದ ನಡುತೋಟ, ಕಳಿಗೆ, ಪಳ್ಳಿಗದ್ದೆ ಹಾಗೂ ಆಸಪಾಸಿನ ನಿವಾಸಿಗಳನ್ನು ಒಳಗೊಂಡ ಗ್ರಾಮ ದೈವ ನಡುತೋಟ ಶಿರಾಡಿ ದೈವದ ನೇಮೋತ್ಸವವು ಮಾ.14 ಮತ್ತು 15 ರಂದು ನಡೆಯಿತು.

ಸಂಜೆ ಆರಂಭಗೊಂಡ ಪರಿವಾರದೈವಗಳ ನೇಮೋತ್ಸವ ರಾತ್ರಿ ಇಡೀ ನಡೆದು ಮರುದಿನ ಬೆಳಿಗ್ಗೆ ಶಿರಾಡಿ ದೈವದ ನೇಮ ನಡೆಯಿತು. ಶಿರಾಡಿ ದೈವಸ್ಥಾನದ ಆಡಳಿತ ಮುಕ್ತೇಶ್ವರ ಪರಶುರಾಮ ಪಳ್ಳಿಗದ್ದೆ, ಮುಕ್ತೇಶ್ವರಗಳಾದ ವೆಂಕಟ್ರಮ ಮಣಗೌಡ ಕಳಿಗೆ, ಹರಿಶ್ಚಂದ್ರ ಗೌಡ ನಡುತೋಟ, ಶಿವಪ್ರಸಾದ ನಡುತೋಟ, ವಿಜಯಕುಮಾರ ನಡುತೋಟ, ಯಶೋಧರ ಬಾನಡ್ಕ ಹಾಗೂ ಇತರರು ಉಪಸ್ಥಿತರಿದ್ದರು. ದೈವದ ಮುಖ್ಯ ಪೂಜಾರಿ ಚೆನ್ನಕೇಶವ ಗೌಡ ನಡುತೋಟ ಅವರು ಕರ್ತವ್ಯ ನಿರ್ವಹಿಸಿರುವರು.