ಮಾಜಿ ಸಚಿವ ಈಶ್ವರಪ್ಪ ರವರು ಅಜಾನ್ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನಲ್ ಸಮಿತಿ ಖಂಡನೆ

0

ಮಾಜಿ ಸಚಿವ ಈಶ್ವರಪ್ಪ ರವರು ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಸಮಾರಂಭ ಒಂದರಲ್ಲಿ ಅಜಾನ್ ಕುರಿತು ಮುಸ್ಲಿಂ ಬಾಂಧವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನಲ್ ಸಮಿತಿ ಖಂಡಿಸಿದೆ.

ಮಾರ್ಚ್ 22 ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆದ ಸಮಿತಿಯ ಈ ಸಾಲಿನ ಪ್ರಥಮ ಸಭೆಯಲ್ಲಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜ ಕೊಚ್ಚಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಒಕ್ಕೊರಳಿನಿಂದ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಇಂದ್ರಾಜೆ, ಕೋಶಾಧಿಕಾರಿ ಅಬ್ದುಲ್ ಹಮೀದ್ ಸುಣ್ಣ ಮೂಲೆ, ಉಪಾಧ್ಯಕ್ಷರುಗಳಾದ ಹಾಜಿ ಇಬ್ರಾಹಿಂ ಬೀಡು, ಇಸ್ಮಾಯಿಲ್ ಸಅದಿ ಕುಂಭಕೋಡು, ಜಬ್ಬಾರ್ ಸಕಾಫಿ ಮೇನಾಲ, ಜೊತೆ ಕಾರ್ಯದರ್ಶಿ ಕಾದರ್ ಎಲಿಮಲೆ, ಅಬೂಬಕರ್ ಜಟ್ಟಿಪಳ್ಳ, ಹಾಗೂ ಸದಸ್ಯರು ಉಪಸ್ಥಿತರಿದ್ದರು.