ಆಲೆಟ್ಟಿ ಗ್ರಾಮದ ಗುಂಡ್ಯದಲ್ಲಿ ಪವಿತ್ರನ್ ರವರು ನೂತನವಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶ ಕಾರ್ಯಕ್ರಮ ಹಾಗೂ ವಿಶೇಷವಾಗಿ ಶ್ರೀ ಮುತ್ತಪ್ಪನ್ ದೈವದ ವೆಳ್ಳಾಟಂ ಮಾ.23 ರಂದು ನಡೆಯಿತು.
ಬೆಳಗ್ಗೆ ಗಣಪತಿ ಹವನವಾಗಿ ಬಳಿಕ ಗೃಹಪ್ರವೇಶದ ಪ್ರಯುಕ್ತ ಪೈಂಗುತ್ತಿ ಸೇವೆ ನಡೆದು ಶ್ರೀ ಮುತ್ತಪ್ಪನ್ ದೈವದ ನರ್ತನ ಸೇವೆಯು ನಡೆಯಿತು. ಬಳಿಕ ಆಗಮಿಸಿದ ಸರ್ವರಿಗೂ ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.