ಗುರುಂಪು ಬರೆ ಜರಿತ ಘಟನೆ : ಮೂವರು ಮಣ್ಣಿನಯಡಿಯಲ್ಲಿ – ಮುಂದುವರಿದ ರಕ್ಷಣಾ ಕಾರ್ಯ

0

ಸುಳ್ಯದ ಗುರುಂಪು ಬಳಿ ಬರೆ ಜರಿತ ಘಟನೆಗೆ ಸಂಬಂಧಿಸಿ ಇನ್ನಷ್ಟು ಮಾಹಿತಿ ಲಭ್ಯವಾಗಿದ್ದು, ಮೂವರು ಮಣ್ಣಿನಡಿ ಸಿಲುಕಿದ್ದಾರೆಂದು ತಿಳಿದುಬಂದಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ಮನೆಯ ಹಿಂದುಗಡೆ ಬರೆಯಿದ್ದು, ಇದರ ಸಮೀಪ ಪಿಲ್ಲರ್ ನಿರ್ಮಿಸುವ ಕಾಮಗಾರಿ ನಡೆಯುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆಂದು ತಿಳಿದುಬಂದಿದೆ. ಜೆಸಿಬಿಯಿಂದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.