ಎ.1 ಮತ್ತು 2 : ಕೊರಂಬಡ್ಕ ಕ್ಷೇತ್ರದಲ್ಲಿ ಶ್ರೀ ದೈವಗಳ ನೇಮೋತ್ಸವ- ಇಂದು ಗೊನೆ ಮುಹೂರ್ತ

0

ಜಯನಗರ ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ,
ಶ್ರೀ ಗುಳಿಗ,
ಶ್ರೀ ಕೊರಗತನಿಯ ದೈವಸ್ಥಾನದಲ್ಲಿ
ಎ.1ಮತ್ತು 2 ರಂದು ನಡೆಯುವ ಕಾಲಾವಧಿ ನೇಮೋತ್ಸವಕ್ಕೆ ಮಾ.25 ರಂದು ಗೊನೆ ಮುಹೂರ್ತ ನಡೆಯಿತು.
ಸ್ಥಳೀಯರಾದ ಮಹಾಲಕ್ಷ್ಮಿ ಕೊರಂಬಡ್ಕ ರವರ ತೋಟದಲ್ಲಿ ಮುಹೂರ್ತದ ಗೊನೆ ಕಡಿಯುವುದನ್ನು ದೈವದ ಪಾತ್ರಿ ಮೋಹನ್ ಹೊಸಗದ್ದೆ ಮತ್ತು ಬಾಬು.ಕೆ ರವರು ನೆರವೇರಿಸಿದರು.
ಬಳಿಕ ಸಿಡಿಮದ್ದು,ವಾದ್ಯ ಘೋಷದ ಮೂಲಕ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ತರಲಾಯಿತು. ಬಳಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅದ್ಯಕ್ಷ ಕೇಶವ.ಸಿ.ಎ ಹೊಸಗದ್ದೆ, ಉಪಾದ್ಯಕ್ಷ ಸುರೇಶ್.ಎನ್,
ಕಾರ್ಯದರ್ಶಿ ಸುಂದರ ಕುದ್ಪಾಜೆ, ಖಜಾಂಜಿ ರಮೇಶ್ ಕೊಡಂಕೇರಿ, ನೇಮೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಬಳ್ಳಾರಿ, ಪ್ರಶಾಂತ್ ಕುದ್ಪಾಜೆ, ದಯಾನಂದ ಕುದ್ಪಾಜೆ, ಜನಾರ್ದನ ಜಿ ಜಯನಗರ, ಸಚಿನ್ ಕೊಯಿಂಗೋಡಿ, ರೋಹಿತ್ ಕೊಯಿಂಗೋಡಿ ಹಾಗೂ ಆಡಳಿತ ಮತ್ತು ನೇಮೋತ್ಸವ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಪಾಲ್ಗೊಂಡಿದ್ದರು.