ಕಲ್ಲುಗುಂಡಿ ಒತ್ತೆಕೋಲದ ಮೇಲೆರಿ ಜೋಡಣೆಯ ಕಾರ್ಯ

0

ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಇಂದು ನಡೆಯಲಿದ್ದು ಬೆಳಗ್ಗೆ ಗಣಪತಿ ಹವನವಾಗಿ ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ತೀಯ ಸಮಾಜ ಬಾಂಧವರಿಂದ ಮೆಲೇರಿ ಜೋಡಣೆಯ ಕಾರ್ಯ ನಡೆಯಿತು. ಸುಮಾರು 200 ಮಿಕ್ಕಿ ತೀಯ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಎಲ್ಲಾ ಸ್ವಯಂ ಸೇವಕರಿಗೆ ವಿ.ವಿ.ಬಾಲನ್ ರವರು ಮಜ್ಜಿಗೆ ಹಾಗೂ ಛಾಯಾ ಚಿತ್ರಗ್ರಾಹಕ ಯೂಸುಫ್ ರವರು ತಂಪು ಪಾನೀಯದ ವ್ಯವಸ್ಥೆ ಮಾಡಿದರು. ಮಧ್ಯಾಹ್ನ ಆಡಳಿತ ಸಮಿತಿ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.