ಬರೆ ಕುಸಿದು ಮೃತಪಟ್ಟ ಕಾರ್ಮಿಕರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಘೋಷಣೆಗೆ ಸಿಐಟಿಯು ಮನವಿ

0

ಶನಿವಾರ ಸುಳ್ಯದ ಗುರುಂಪು ಎಂಬಲ್ಲಿ ಗುಡ್ಡಜರಿದು ದುರ್ಮರಣಕ್ಕೀಡಾದ ಮೂವರು ಕಾರ್ಮಿಕರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಸುಳ್ಯದ ತಹಶೀಲ್ದಾರರಿಗೆ ಇಂದು ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು .

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ವಿಶ್ವನಾಥ ನೆಲ್ಲಿಬಂಗಾರಡ್ಕ ,ಕೋಶಾಧಿಕಾರಿ ವಿ.ಗಣೇಶ್ ,ಉಪಾದ್ಯಕ್ಷರಾದ ಮಂಜುನಾಥ ಬಳ್ಳಾರಿ ,ಜೊತೆ ಜೊತೆ ಕಾರ್ಯದರ್ಶಿಯಾದ ಕೃಷ್ಣ ಕೇರ್ಪಳ ಇವರು ಉಪಸ್ಥಿತರಿದ್ದರು.