ಎಣ್ಮೂರು ಗರಡಿಯಲ್ಲಿ ನೇಮೋತ್ಸವ ಪ್ರಯುಕ್ತ ಗೊನೆ ಮುಹೂರ್ತ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ

0

ಎಣ್ಮೂರು ಶ್ರೀನಾಗಬ್ರಹ್ಮ ಕೋಟಿಚೆನ್ನಯ ಆದಿ ಗರಡಿಯಲ್ಲಿ ಆದಿ ಬೈದರುಗಳ ನೇಮೋತ್ಸವವು ಏಪ್ರಿಲ್ 5ರಂದು ನಡೆಯಲಿದ್ದು, ಆ ಪ್ರಯುಕ್ತ ಇಂದು (ಮಾ. 29 ರಂದು) ಪೂರ್ವ ಸಂಪ್ರದಾಯದಂತೆ ಗೊನೆ ಕಡಿಯುವ ಕಾರ್ಯಕ್ರಮ ನಡೆಯಿತು.


ಬೆಳಿಗ್ಗೆ ಅರ್ಚಕ ಪರಮೇಶ್ವರ ಭಟ್ ರವರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗರಡಿಯಲ್ಲಿ ಶುದ್ದಿ ಕಲಶ ಹೋಮ, ಗಣ ಹೋಮ, ಬಿರ್ಮೆರ್, ಉಳ್ಳಾಕುಲು, ಕಾಜು ಕುಜುಂಬ ಚಾವಡಿಯಲ್ಲಿ ಕಳಶ ಹೋಮ, ಶುದ್ದಿ ಕಲಶ ಹೋಮ ನಡೆಸಲಾಯಿತು. ಬಳಿಕ ಬೈದರುಗಳಿಗೆ ನೂತನವಾಗಿ ನಿರ್ಮಿಸಿದ ಸುರಿಯ ಹಾಗೂ ಉಳ್ಳಾಗಲು ದೈವಗಳಿಗೆ ಬೆಳ್ಳಿ ಕವಚ, ಆಯುಧಗಳನ್ನು ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಒಪ್ಪಿಸಲಾಯಿತು.


ಸಂದರ್ಭದಲ್ಲಿ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಮತ್ತು ಶ್ರೀಮತಿ ಪದ್ಮ ಆರ್. ಶೆಟ್ಟಿ, ರಘುನಾಥ ರೈ ಅಲೆಂಗಾರ, ಪಂಜಿಮೊಗರು ರಘುನಾಥ ರೈ, ನಾಗೇಶ್ ಆಳ್ವ ಕಟ್ಟಬೀಡು, ಅನಿಲ್ ಕುಮಾರ್ ಆಳ್ವ, ಎನ್ ಜಿ ಲೋಕನಾಥ ರೈ ಎಣ್ಮೂರು, ಜಗನ್ನಾಥ ರೈ ಮೇಲ್ಮನೆ ಕುಳಾತ್ತೋಡಿ, ಭಕ್ತಾದಿಗಳು ಇದ್ದರು.
(ವರದಿ ಎ ಎಸ್ ಎಸ್ ಅಲೆಕ್ಕಾಡಿ)