ಬಳ್ಪ ರಕ್ಷಿತಾರಣ್ಯದಲ್ಲಿ ಭೀಕರ ಬೆಂಕಿ ಅವಘಡ-ಮುಂದುವರಿದ
ಕಾರ್ಯಾಚರಣೆ

0

ಬಳ್ಪ ರಕ್ಷಿತಾರಣ್ಯದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು ಅರಣ್ಯ ಇಲಾಖೆಯವರು, ಊರವರು, ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ನಾಲ್ಕೂರು ಮತ್ತು ಏನೆಕಲ್ಲು ಗ್ರಾಮಗಳನ್ನು ಹೊಂದಿಕೊಂಡಿರುವ ಅರಣ್ಯ ಪ್ರದೇಶ ತುಂಬತ್ತಾಜೆ, ವಲ್ಪಾರೆ, ಚಾರ್ಮತ ಅರಣ್ಯ ಪ್ರದೇಶದ ಹೊಡ್ಡೆತಮುಖ ಭಾಗದಲ್ಲಿ ಬೆಂಕಿ ಆವರಿಸಿತ್ತು.


ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಊರವರು, ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಸೇರಿಕೊಂಡು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನಿನ್ನೆ ಸಂಜೆ ಒಮ್ಮೆ ನಂದಿಸಲಾಗಿದ್ದು ಇಂದು ಮತ್ತೆ ಬೆಂಕಿ ಹೊತ್ತಿ ಉರಿದು ಆವರಿಸುತ್ತಿರುವುದಾಗಿ ತಿಳಿದು ಬಂದಿದೆ.