ಕೊರಂಬಡ್ಕ ಕೊರಗಜ್ಜ‌ ಕ್ಷೇತ್ರದ ಅಭಿವೃದ್ಧಿಗೆ ಧರ್ಮಸ್ಥಳ ‌ಕ್ಷೇತ್ರದಿಂದ ರೂ.25 ಸಾವಿರ ದೇಣಿಗೆ

0

ಸುಳ್ಯ ಜಯನಗರ – ಕೊರಂಬಡ್ಕ ಕೊರಗಜ್ಜ‌ ಕ್ಷೇತ್ರದ ಅಭಿವೃದ್ಧಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಯವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರದಿಂದ ರೂ.25000 ಸಾವಿರ ಬಿಡುಗಡೆಗೊಂಡಿದ್ದು ಇದರ ಡಿಡಿ ಚೆಕ್ ನ್ನು ಸುಳ್ಯ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ಕಾಣಿಯೂರು ಅವರು ಕೊರಂಬಡ್ಕ ಕ್ಷೇತ್ರಕ್ಕೆ ಬಂದು ಆಡಳಿತ ಸಮಿತಿಯ ಅದ್ಯಕ್ಷರಾದ ಕೇಶವ ಹೊಸಗದ್ದೆ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ಹೇಮಾಲತಾ, ಸೇವಾಪ್ರತಿನಿಧಿ ಶ್ರೀಮತಿ ವನಿತಾ, ಜನಜಾಗೃತಿ ವೇದಿಕೆಯ ನಗರಧ್ಯಾಕ್ಷ ಎಂ.ವೆಂಕಪ್ಪ ಗೌಡ,ಶ್ರೀಮತಿ ವೀಣಾನಂಬಿಯಾರ್,ಕೊರಂಬಡ್ಕ ಕ್ಷೇತ್ರದ ವ್ಯವಸ್ಥಾಪನಾ ಆಡಳಿತ ಸಮಿತಿಯ ಸಂಚಾಲಕ ಜಗನ್ನಾಥ.ಜಿ ಜಯನಗರ,ಕಾರ್ಯದರ್ಶಿ ಸುಂದರ ಕುದ್ಪಾಜೆ, ನೇಮೋತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ಬಳ್ಳಾರಿ,ಜೊತೆ ಕಾರ್ಯದರ್ಶಿ ದಯಾನಂದ ಕುದ್ಪಾಜೆ,ಉಪಾಧ್ಯಕ್ಷ ಸಚಿನ್ ಕೊಯಿಂಗೋಡಿ,ತಿಲಕ್ ರಾಜ್,ಅನಿಲ್ ಕುದ್ಪಾಜೆ,ಲೋಕೇಶ್ ಕೊಡಂಕೀರಿ,ರಮೇಶ್ ಕುದ್ಪಾಜೆ, ಶಿವಕುಮಾರ್ ಕುದ್ಪಾಜೆ ಉಪಸ್ಥಿತರಿದ್ದರು.