ಸೂಲಂತ್ತಡ್ಕ : ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದರುಗಳ ಮಹಾದ್ವಾರ ಉದ್ಘಾಟನೆ

0

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದರುಗಳ ಗರಡಿಗೆ ತೆರಳುವ ಪ್ರಧಾನ ರಸ್ತೆ ಸೂಲಂತ್ತಡ್ಕದಲ್ಲಿ ನೂತನವಾಗಿ ನಿರ್ಮಿಸಿದ ಎಣ್ಮೂರುಗುತ್ತು ನವೀನ್ಚಂದ್ರರವರು ಸೇವಾ ರೂಪದಲ್ಲಿ ನೀಡಿದ ಮಹಾದ್ವಾರವನ್ನು ಗರಡಿಯ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರು ಉದ್ಘಾಟಿಸಿದರು. ಬಳಿಕ ನಾಮಫಲಕ ಅನಾವರಣಗೈದು ಸೇವಾ ರೂಪವಾಗಿ ನೀಡಿದ ನವೀನಚಂದ್ರರಿಗೆ ಶುಭ ಹಾರೈಸಿ, ಸೇವೆ ಮಾಡಿದ ಎಲ್ಲರಿಗೂ ಬೈದರುಗಳ ಅನುಗ್ರಹವಿರಲಿ. ಹೆಚ್ಚೆಚ್ಚು ಸೇವೆ ನೀಡುವಂಥಾಗಲಿ ಎಂದರು. ಅರ್ಚಕ ಪರಮೇಶ್ವರ ಭಟ್ ಪಡ್ಪಿನಂಗಡಿ ವೈದಿಕ ಕಾರ್ಯಕ್ರಮ ನಡೆಸಿದರು.


ಎನ್.ಜಿ. ಲೋಕನಾಥ ರೈಯವರು ಸಂದರ್ಬೋಚಿತವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಸೇವಾರ್ಥಿ ನವೀನ್ಚಂದ್ರ ರೈ, ರಘುನಾಥ ರೈ ಕೆ. ಎನ್., ನಾಗೇಶ್ ಆಳ್ವ ಕಟ್ಟಬೀಡು, ಸುಧೀರ್ ಕುಮಾರ್ ಶೆಟ್ಟಿ ಕಟ್ಟಬೀಡು, ಸೋಮಶೇಖರ ರೈ, ಗೋಪಾಲಕೃಷ್ಣ ರೈ, ಸುಧೀನ್ ಕುಮಾರ್ ರೈ, ಸ್ವಸ್ತಿಕ್ ರೈ, ಜಗದೀಶ್ ರೈ ಕಿನ್ಯಾಳ, ದಿವಾಕರ ರೈ, ಹರ್ಷಿತ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.