ಪಂಜದ ಕೃಷ್ಣನಗರದಲ್ಲಿ ಲಾರಿ-ಸ್ಕೂಟರ್ ಅಪಘಾತ : ಸ್ಕೂಟರ್ ಸವಾರನಿಗೆ ಗಾಯ

0

ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಪಂಜದ ಕೃಷ್ಣನಗರ
ಎಂಬಲ್ಲಿ ಲಾರಿ-ಸ್ಕೂಟರ್ ಅಪಘಾತವಾಗಿ
ಸ್ಕೂಟರ್ ಸವಾರ ಗಾಯಗೊಂಡ ಘಟನೆ ಎ.8ರಂದು ರಾತ್ರಿ ವರದಿಯಾಗಿದೆ.


ಪಂಜದ ಕಡೆಗೆ ಬರುತ್ತಿದ್ದ ಶಿವಪ್ರಸಾದ್ ಎಂಬವರ ಸ್ಕೂಟರ್ ಮತ್ತು ಎದುರಿನಿಂದ ಬಂದ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಪಂಜದ ಕೃಷ್ಣನಗರ ಸಮೀಪ ಪುತ್ಯ ಎಂಬಲ್ಲಿ ಡಿಕ್ಕಿಯಾಗಿದೆ.

ಶಿವಪ್ರಸಾದ್ ರ ತಲೆ
ಭಾಗಕ್ಕೆ ಗಾಯವಾಗಿದ್ದು ಅವರನ್ನು ಅಂಬ್ಯುಲೆನ್ಸ್ ನಲ್ಲಿ ಕಡಬದ ಆಸ್ಪತ್ರೆಗೆ ದಾಖಲಿಸಲಾಗಿದೆ.ಲಾರಿಯ ಹಿಂದಿನ ಟಯರಿಗೆ ಸ್ಕೂಟರ್ ಡಿಕ್ಕಿ ಹೊಡೆದಿದ್ದು ಸ್ಕೂಟರ್ ನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ.