ಕರಿಕ್ಕಳ : ಮುಚ್ಚಿಲದ ಬಳಿ ಬೈಕ್ -ರಿಕ್ಷಾ ಡಿಕ್ಕಿ

0

ಕರಿಕ್ಕಳದ ಮುಚ್ಚಿಲ ಬಸ್ ತಂಗುದಾಣ ಎದುರು ಬೈಕ್ -ರಿಕ್ಷಾ
ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ಎ.11ರಂದು
ವರದಿಯಾಗಿದೆ.


ಪಂಜದ ಕಡೆಗೆ ಹೋಗುತ್ತಿದ್ದ ಯಶವಂತ ಎಂಬವರ ಬೈಕ್ ಮತ್ತು
ಎದುರಿನಿಂದ ಬರುತ್ತಿದ್ದ ಮರದ ನಾಯಕ ಎಂಬವರ ಹೊಸ ರಿಕ್ಷಾ ಅಪಘಾತ ಸಂಭವಿಸಿದೆ.ಗಾಯ ಗೊಂಡ ಬೈಕ್ ಸವಾರ ಯಶವಂತ ರನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ಳಾರೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.