ಅಡ್ಪಂಗಾಯ-ಗುರುಮಠ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಅಜ್ಜಾವರ ಗ್ರಾಮದ ಅಡ್ಪಂಗಾಯ – ಗುರುಮಠ ನೂತನ ಕಾಂಕ್ರೀಟ್ ರಸ್ತೆ ಏ. 17ರಂದು ಉದ್ಘಾಟನೆಗೊಂಡಿತು.


ರೂ. 5 ಲಕ್ಷ ವೆಚ್ಚದ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಅಡ್ಪಂಗಾಯ, ಶಿರಾಜೆ, ಕರ್ಲಪ್ಪಾಡಿ ಕುಟುಂಬದ ಹಿರಿಯರಾದ ಎ.ಬಿ. ರಾಮಣ್ಣ ಗೌಡ ಅಡ್ಪಂಗಾಯ ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಅಡ್ಪಂಗಾಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕ್ಷೇತ್ರದ ಗುರುಸ್ವಾಮಿ ಶಿಪ್ರಕಾಶ್ ಅಡ್ಪಂಗಾಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

ಗುತ್ತಿಗೆದಾರ ಚಂದ್ರಶೇಖರ ಅಡ್ಪಂಗಾಯ ಕಾಂಕ್ರೀಟೀಕರಣ ಕಾಮಗಾರಿಯ ಗುತ್ತಿಗೆ ವಹಿಸಿದ್ದರು. ಕ್ಷೇತ್ರದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.