ಕಾಂತು ಅಜಿಲ ಎಡಮಂಗಲರವರ ಶ್ರದ್ಧಾಂಜಲಿ ಸಭೆ, ಸಹಾಯಧನ ಹಸ್ತಾಂತರ

0

ಎಡಮಂಗಲ ಗ್ರಾಮದ ಮಾಲಿಂಗಿರಿ ಕಾಂತು ಅಜಿಲರವರು ಇತ್ತೀಚೆಗೆ ನಿಧನರಾಗಿದ್ದು, ಅವರ ಶ್ರದ್ಧಾಂಜಲಿ ಕಾರ್ಯಕ್ರಮವು ಎಪ್ರಿಲ್ 17ರಂದು ಶ್ರೀ ಪಂಚಲಿಂಗೇಶ್ವರ ದೇವರ ಶಿವ ಪಾರ್ವತಿ ಸಭಾಭವನದಲ್ಲಿ ನಡೆಯಿತು.


ದೇವಳದ ವ್ಯವಸ್ಥಾಪನ ಸಮಿತಿ ಹಾಗೂ ನಾಲ್ಕು ಗ್ರಾಮ ಒಂಬತ್ತು ಉತ್ತರದ ಸಮಸ್ತರು ಕಾರ್ಯಕ್ರಮ ಆಯೋಜಿಸಿದ್ದರು. ಮೃತರ ಪುತ್ರ ಮೋನಪ್ಪ ರವರು ದೀಪ ಬೆಳಗಿಸಿ ಪುಷ್ಪಾರ್ಚನೆಗೆದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಕೃಷ್ಣ ರೈ ಮಾಲಿಂಗಿರಿಯವರು ಕಾಂತುರವರು ಹುಟ್ಟಿ ಬಾಳಿ, ಸಮಾಜದಲ್ಲಿ ಬದುಕಿದ ರೀತಿಯನ್ನು ತಿಳಿಸಿದರು. ಸಚಿವ ಎಸ್ ಅಂಗಾರ ರವರು ಮಾತನಾಡಿ, ಬದುಕುವುದಾದರೆ ಕಾಂತು ಅಜಿಲರ ಹಾಗೆ ಬದುಕಬೇಕು. ಸರಳ ಸಜ್ಜನಿಕೆಗೆ ಒತ್ತುಕೊಟ್ಟು ಬದುಕಿದ ಕಾಂತು ಅಜಿಲರು ಮಾದರಿಯಾಗಿದ್ದಾರೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ವಿಶ್ವನಾಥ ಗೌಡ ಕಲ್ಲೆಂಬಿ ಬಳ್ಳಡ್ಕ, ಈಶ್ವರ ಜಾಲ್ತಾರು, ಗಿರೀಶ್ ನಡುಬೈಲು, ಲೋಕಯ್ಯ ಪರವ, ಅಣ್ಣು ಅಜಿಲ ಕಡಬ, ಮೋನಪ್ಪ ಅಜಿಲ, ಎಲ್ಯಣ್ಣ ಗೌಡ ಮಾತನಾಡಿದರು.
ಮೃತರ ಪತ್ನಿ ಗಿರಿಜ, ಅವರ ಕುಟುಂಬಸ್ಥರು, ಸ್ಥಳೀಯ ಪ್ರಮುಖರು, ಗಣೇಶ್ ಉದನಡ್ಕ ದೇವಳದ ವ್ಯವಸ್ಥಾಪನ ಸಮಿತಿಯವರು ಸಭೆಯಲ್ಲಿ ಉಪಸ್ಥಿತರಿದ್ದರು.